Saturday, September 21, 2024

ಸುದ್ದಿ-ಸದ್ದು ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಕಾರಿನಲ್ಲಿ ಸೆಕ್ಸ್! ಕೆಲಸ ಮುಗಿದ ಮೇಲೆ ನಂಬರ್ ಬ್ಲಾಕ್

ಬೆಳಗಾವಿ (ನ.30)  ಮ್ಯಾಟ್ರಿಮೋನಿಯಲ್ ಪೋರ್ಟಲ್ ಮೂಲಕ ಪರಿಚಯವಾದ ಹುಡುಗಿಗೆ ವಂಚಿಸಿದ ಆರೋಪದ ಮೇಲೆ ಬಂಧಿತನಾದ 31 ವರ್ಷದ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪರಿಚಯವಾದ ವ್ಯಕ್ತಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್ ನನ್ನ ನಂಬರ್ ಬ್ಲಾಕ್ ಮಾಡಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ. ಆರೋಪಿಯನ್ನು ಬೆಳಗಾವಿಯ ಕುಂಪಟಗಿರಿ ನಿವಾಸಿ...

ವಿಧ್ಯಾರ್ಥಿಗಳ ಸಮಸ್ಯೆ ಕಂಡು ಬಸ್ ಡಿಪೋಗೆ ಶಾಸಕ ಈಶ್ವರ ಖಂಡ್ರೆ ಭೇಟಿ

 ಭಾಲ್ಕಿ: ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಸಮಸ್ಯೆ ಆಲಿಸಲು ವಿದ್ಯಾರ್ಥಿಗಳೊಂದಿಗೆ ಶಾಸಕ ಈಶ್ವರ ಖಂಡ್ರೆ ಅವರು ಬಸ್ ಡಿಪೋಗೆ ಭೇಟಿ ನೀಡಿ ಬಸ್ ಸಮಸ್ಯೆ ಬಗೆ ಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಡಿ ಭಾಗದ ಭಾಟಸಾಂಗವಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ‌ ಮನವಿ...

ಆಸ್ತಿಗಾಗಿ ಮೃತ ವೃದ್ದೆಯ ಹೆಬ್ಬೆಟ್ ಒತ್ತಿಸಿಕೊಂಡಿದ್ದವನ ಮೇಲೆ ಎಫ್​ಐಆರ್

ಮೈಸೂರು:ಆಸ್ತಿಗಾಗಿ ಖಾಲಿ ಪತ್ರಕ್ಕೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಪ್ರಕರಣ ಸಂಬಂಧಪಟ್ಟಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಮೈಸೂರಿನ ಶ್ರೀರಾಂಪುರದ ಜಯಮ್ಮ ನವೆಂಬರ್ 16ರಂದು ಮೃತಪಟ್ಟಿದ್ದರು. ಈ ವೇಳೆ ಮೃತ ಜಯಮ್ಮರ ಸಹೋದರಿ ಮಗ ಸುರೇಶ್​ ಎಂಬಾತ ಬಾಂಡ್​ ಪೇಪರ್​ಗೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದ. ಇದನ್ನು ಮೃತ ಜಯಮ್ಮ ಸಹೋದರನ...

ಕನ್ನಡ ನಾಡು ನುಡಿಯ ಸೇವೆಗೆ ಸದಾ ಬದ್ಧ:-ಮಂಗಳಾ ಮೆಟಗುಡ್

ಬೈಲಹೊಂಗಲ(ನ.28): ಕನ್ನಡ ನಾಡು ನುಡಿ ಸೇವೆಗಾಗಿ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟ ಎಲ್ಲ ಕನ್ನಡ ಮನಸ್ಸುಗಳಿಗೆ ಆಭಾರಿಯಾಗಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ  ಮಂಗಳಾ ಶ್ರೀಶೈಲ ಮೆಟಗುಡ್ ಹೇಳಿದರು. ಬೈಲಹೊಂಗಲದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಐದು ವರ್ಷಗಳ ಅವಧಿಯಲ್ಲಿ ಕನ್ನಡ ಭವನಗಳನ್ನು ನಿರ್ಮಿಸಿ ಬಾಕಿ ಇರುವ ಇನ್ನಿತರ...

ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಕೆ.ಎಸ್.ಈಶ್ವರಪ್ಪ

ಬೆಳಗಾವಿ (ನ.28): ಕಾಂಗ್ರೆಸ್‌ನಲ್ಲಿ ತಮಗೆ ಬೇಕಾದವರಿಗೆ, ಹಣವಂತರಿಗೆ, ಹಾಗೂ ತಮ್ಮ ಆಪ್ತರಿಗೆ ಪರಿಷತ್ ಟಿಕೆಟ್ ನೀಡಿದ್ದಾರೆ. ಇದನ್ನು ಜನ ತಿರಸ್ಕರಿಸುತ್ತಾರೆ. ಇನ್ನು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಟಾಂಗ್ ಕೊಟ್ರು. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು,...

ಮಗಳ ಗರ್ಭಿಣಿಗೆ ಕಾರಣವಾದವರನ್ನು ಹುಡುಕಿಕೊಡಿ! ದೂರಿಗೆ ಸುಸ್ತಾದ ಪೋಲೀಸರು

ಕೊಪ್ಪಳ (ನ.28): ಅಪ್ರಾಪ್ತೆ ಪುತ್ರಿ ಗರ್ಭಿಣಿಯಾಗಿದ್ದು ಇದಕ್ಕೆ ಕಾರಣವಾದವರನ್ನು ಹುಡುಕಿ ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಿ ಎಂದು ಪಾಲಕರೊಬ್ಬರು ಇಲ್ಲಿನ ಪೊಲೀಸರಿಗೆ ವಿಚಿತ್ರ ದೂರನ್ನು ಕೊಟ್ಟಿದ್ದಾರೆ. ಈ ಪ್ರಕರಣದಿಂದ ಇದೀಗ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.  ಪಟ್ಟಣದ ವಾರ್ಡ್ 22ರಲ್ಲಿ ವಾಸಿಸುವ ಪಾಲಕರೊಬ್ಬರು ತಮ್ಮ 17 ವರ್ಷದ ಬಾಲಕಿ ಕಾಲೇಜಿಗೆ ತೆರಳುತ್ತಿದ್ದಳು. ನ.23ರಂದು...

ಚಳಿಗಾಲ ಅಧಿವೇಶನದ ಪೂರ್ವ ಸಿದ್ಧತೆಯನ್ನು ಕಾಲಮಿತಿಯಲ್ಲಿ  ಪೂರ್ಣಗೊಳಿಸಲು ಸೂಚನೆ:-ಎಲ್.ಕೆ.ಅತೀಕ್

ಬೆಳಗಾವಿ(ನ.27): ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಸತಿ, ಊಟೋಪಹಾರ ಹಾಗೂ ಸಾರಿಗೆ ಮತ್ತಿತರ ವ್ಯವಸ್ಥೆಯನ್ನು ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು. ಅಧಿವೇಶನದ ಹಿನ್ನೆಲೆಯಲ್ಲಿ...

ಸಿಐಡಿ ತಂಡದಿಂದ ಗಾಂಜಾ ಮಾರಾಟಗಾರನ ಮೇಲೆ ದಾಳಿ

ಬೆಳಗಾವಿ (ನ.27) :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದ ಜಮೀನೊಂದರ ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಂಧಿಸಿ ಗಾಂಜಾ ಗಿಡಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಕಂಚಕರವಾಡಿ ಗ್ರಾಮದ ಸಿದ್ರಾಮ ಮಾರುತಿ ತೋಳೆ ಬಂಧಿತ ಆರೋಪಿ.ಈತನಿಂದ ಸುಮಾರು ರೂ.1,46,250 ಕಿಮ್ಮತ್ತಿನ 9 ಕೆ‌.ಜಿ 750 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಮತ್ತು ನಗದು ಹಣ ರೂ.130...

ಹಿರೇಬಾಗೇವಾಡಿಯಲ್ಲಿ ರಾಶಿ ರಾಶಿ ಕಸ ! ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು.

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆ ಮಾಯವಾಗಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಗಬ್ಬುನಾರುತ್ತಿದೆ ಕೇಂದ್ರ ಸರಕಾರ ಸ್ವಚ್ಛ ಭಾರತ್‌ ಯೋಜನೆ ಜಾರಿ ಮಾಡಿದೆಯಾದರೂ ಇಲ್ಲಿನ ಪಿಡಿಒ, ಸಿಬ್ಬಂದಿ ತಾತ್ಸರ ಮನೋಭಾವದಿಂದ ಸ್ವಚ್ಛತೆ ಮರೀಚಿಕೆಯಾಗಿದೆ. ಸಮೀಪದ ಅಂಗಡಿ ಮನೆಗಳಿಂದ ಹೊರ ಬೀಳುವ ತ್ಯಾಜ್ಯ ಮುಖ್ಯ ರಸ್ತೆ ಅಕ್ಕ ಪಕ್ಕ ಹಾಗೂ ಗಟಾರಗಳಲ್ಲಿ...

ಆದಾಯಕ್ಕಿಂತ್ ಹೆಚ್ಚಿನ ಆಸ್ತಿ ಮಾಡಿದ ಅಧಿಕಾರಿ ಎ ಕೆ ಮಾಸ್ತಿ ಎಸಿಬಿ ಬಲೆಗೆ

ಬೈಲಹೊಂಗಲ(ಅ.24) ಇಂದು ಬೆಳಿಗ್ಗೆ ರಾಯಬಾಗದ ಕೋ-ಆಪರೇಟಿವ್ ಡೆವಲಪ್‌ಮೆಂಟ್ ಆಫೀಸರ್ ಅಡವಿಸಿದ್ದೇಶ್ವರ ಕರೆಪ್ಪಾ ಮಾಸ್ತಿ, ಅವರ ಮನೆ ಮತ್ತು ಸಂಬಂಧಿಸಿದ ಸ್ಥಳಗಳ ಮೇಲೆ ಎಸಿಬಿ ಪೋಲೀಸರು ದಾಳಿ ಮಾಡಿದ್ದಾರೆ. ಸರ್ಕಾರಿ ನೌಕರರು ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿರುವ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದ ಆಧಾರದ ಮೇಲೆ ಬೆಳಗಾವಿ ಭ್ರಷ್ಟಾಚಾರ ನಿಗ್ರಹ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!