ಬೈಲಹೊಂಗಲದಲ್ಲಿ ಅಕ್ಟೋಬರ್ 16 ರಂದು ಕವಿಗೋಷ್ಠಿ

ಬೈಲಹೊಂಗಲ: ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಬೈಲಹೊಂಗಲ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ(ರಿ), ಬೈಲಹೊಂಗಲ ಇವರ ಸಹಯೋಗದಲ್ಲಿ ಅಕ್ಟೋಬರ್ 16 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಕಿತ್ತೂರು ಉತ್ಸವದ ನಿಮಿತ್ತವಾಗಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಶ್ರೀಶೈಲ ಮೆಟಗುಡ್ಡ ವಹಿಸಲಿದ್ದಾರೆ. ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಎ. ಸಿಂಧಿಹಟ್ಟಿ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಆಶಯ ನುಡಿಗಳನ್ನಾಡಲಿದ್ದಾರೆ. ಬೈಲಹೊಂಗಲದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಎಂ. ಬಿರಾದಾರ, ಉಪಾಧ್ಯಕ್ಷ ಯೋಗೀಶ ಬಿ. ಬಿರಾದಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲ್ಲಿದ್ದಾರೆ.

ಡಾ.ಎಸ್.ಎಸ್ ದೇವಲಾಪೂರ, ಗಂಗಾ ಚಕ್ರಸಾಲಿ, ಡಾ. ನಾಗೇಂದ್ರ ಚಲವಾದಿ, ಭಾರತಿ ಕಿತ್ತೂರಮಠ, ಡಾ. ಫಕೀರನಾಯ್ಕ ಗಡ್ಡಿಗೌಡರ, ಎಮ್.ಆರ್.ಪಾಟೀಲ, ಶಿವಪುತ್ರಪ್ಪ ನಿಂ. ಮುದಕವಿ, ಅಮಜವ್ವ ಭೋವಿ, ಶಿವಪ್ರಸಾದ ಹುಲೆಪ್ಪನವರಮಠ, ಸರಸ್ವತಿ ಬಾರಿಮರದ, ಗಜಾನಂದ ಸೂರ್ಯವಂಶಿ, ಸೋಮಲಿಂಗಪ್ಪ ತುಪ್ಪದ, ಸವಿತಾ ಪಾಟೀಲ, ಮಲ್ಲಿಕಾರ್ಜುನ ಹಾರುಗೊಪ್ಪ, ಈರಣ್ಣ ಗೋದಳ್ಳಿ, ಜಯಶ್ರೀ ವಾಲಿಶೆಟ್ಟರ, ಬಾಹುಬಲಿ ಶ್ರೀ.ಉಪಾಧ್ಯೆ, ಸಿದ್ದು ನೇಸರಗಿ, ಸಿದ್ದಲಿಂಗಯ್ಯ ಹಿರೇಮಠ, ಕಿರಣ ಗಣಾಚಾರಿ, ಶಿಲ್ಪಾ ಸು.ಉಪಾಧ್ಯೆ, ಚಂದ್ರಶೇಖರ ಕೊಪ್ಪದ , ಯಲ್ಲನಗೌಡ ಫ. ಶಾನಭೋಗ, ಸಂದೀಪ ಎನ್.ಕುಲಕರ್ಣಿ, ಎಂ.ಡಿ. ಅಲಾಸೆ, ಅವಿನಾಶ ಸೆರೆಮನಿ, ಅಣ್ಣಯ್ಯಸ್ವಾಮಿ ಸಂಬಾಳಿಮಠ, ಬಿ.ವಿ.ಪತ್ತಾರ, ಸರಸ್ವತಿ ಲ. ಉಪ್ಪಾರ, ಸಾಕ್ಷಿ ಚಂ. ನಾಗಣ್ಣವರ, ಬೀರಪ್ಪ ಡಿ. ಡಂಬಳಿ, ಸಾಕ್ಷಿ ಹಿರೇಮಠ, ಶೈಲಶ್ರೀ ಗು. ಜೋಶಿ, ತನುಜಾ ಬಡಿಗೇರ, ಗುರುಪ್ರಸಾದ ವೈದ್ಯ, ರಾಜೇಶ್ವರಿ ಸೊಗಲದ, ಪವಿತ್ರಾ ದಳವಾಯಿ, ಜಾನಕಿದೇವಿ ಭದ್ರಣ್ಣವರ, ಮಂಗಳಗೌರಿ ಗಡ್ಡಿ, ಮಹಾದೇವಿ ಪಾಟೀಲ, ಬಸವರಾಜ ಆರ್. ಹೊನಗೌಡರ, ಸುರೇಶ ಶಿವಪ್ಪನವರ, ಬಸಪ್ಪ ಹೊ. ಶೀಗಿಹಳ್ಳಿ, ಎಸ್.ಎಮ್.ಹಳಿಂಗಳಿ, ಫಕೀರಪ್ಪ ಸೋಮನ್ನವರ, ಬಸವಣ್ಣೆಪ್ಪ ಕಾದ್ರೊಳ್ಳಿ, ಮನು ವೈದ್ಯ, ಮಲ್ಲಿಕಾರ್ಜುನ ಚ. ಕುರಿ, ಅನಸೂಯಾ ಸಾವಳಗಿ, ಈರಪ್ಪ ಯ. ಅಬ್ಬಾರ, ಐಶ್ವರ್ಯ ತುರಮಂದಿ, ಇಬ್ರಾಹಿಂ ಚಾಂದಖಾನವರ, ಪುಷ್ಪಾ ಕುಂಬಾರ, ಮಹಾಂತೇಶ ಜಮಳೂರಮಠ, ಈರಣ್ಣ ಅಗಳಗಟ್ಟಿ, ಶಿವಾನಂದ ಮಾವಿನಕೊಪ್ಪ, ಮಾ.ಮಹೇಶ ಮಲೆಯೂರು, ಪ್ರತಿಭಾ ಚಂ.  ಭಾಸ್ಕರಿ, ಅರುಣಕುಮಾರ ರಾಜಮಾನೆ, ಬಸವರಾಜ ಘೋಡಗೇರಿ, ವಿಶ್ವನಾಥ ಟಿ.ಎಸ್, ಸನಗೌಡ ಸಂಗನಗೌಡರ, ಸಿದ್ದು ಶಾಬನ್ನವರ, ವಿದ್ಯಾವತಿ ರಾ. ಜನವಾಡೆ, ಶೈಲಜಾ ಎಸ್. ಮಠಪತಿ, ಕೌಶಲ್ಯ ಗಂ. ಸರದಾರ, ಸುಭಾಷ ಹೇ. ಚವ್ಹಾಣ, ಯಮುನಾ ಕಂಬಾರ, ವಿರುಪಾಕ್ಷ ಕಮತೆ, ಮಲ್ಲಿಕಾರ್ಜುನ ಎಚ್. ಕಡಕೋಳ, ಶೈಲಜಾ ಮ. ತಳವಾರ, ಬಸಪ್ಪ ಬಿ.ಇಟ್ಟಣ್ಣವರ, ಶ್ವೇತಾ ವಿ. ಪಟ್ಟಣಶೆಟ್ಟಿ, ಸುನಂದಾ ಭರಮನಾಯ್ಕರ, ರಾಜಶೇಖರ ಸರದೇಸಾಯಿ, ಮಾರುತಿ ಭೀ.ದೇಸಾಯಿ, ದುರ್ಗಪ್ಪ ಎಚ್.ಪೂಜಾರಿ, ಮಂಜುನಾಥ ಮಡಿವಾಳರ, ನಾಗರಾಜ ಪಿ. ಗೋವಿ ಕವಿ-ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರಿಷತ್ತಿನ ಎಲ್ಲ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";