ಪಕ್ಷದ ಅಭಿವೃದ್ಧಿ ಕೆಲಸಗಳ ತೋರಿಸಿ ಸದಸ್ಯತ್ವ ಮಾಡಿ : ಕೆಪಿಸಿಸಿ ಸಂಯೋಜಕ ಬಂಗಾರೇಶ ಹಿರೇಮಠ

ಕಿತ್ತೂರು ಮತ ಕ್ಷೇತ್ರದ ನೇಗಿನಹಾಳ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ;

ನೇಗಿನಹಾಳ:ಕಾಂಗ್ರೆಸ್ ಪಕ್ಷ 70ವರ್ಷಗಳಿಂದ ದೇಶದ ಜನರಿಗೆ ಜೀವನಾಂಶ ಸವಲತ್ತುಗಳನ್ನು ಒದಗಿಸಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದೆ ಆದರೆ ಇಂದಿನ ಬಿಜೆಪಿ ಸರಕಾರ 7ವರ್ಷಗಳಲ್ಲಿ ಮತ್ತೆ ಜನಸಾಮಾನ್ಯರಿಗೆ ಅನ್ನ-ನೀರು ದೊರೆಯದಂತೆ ಮಾಡುತ್ತಿದೆ ಎಂದು ಕೆಪಿಸಿಸಿ ಸಂಯೋಜಕ ಬಂಗಾರೇಶ ಹಿರೇಮಠ ಹೇಳಿದರು.

ಗ್ರಾಮದ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಅವರ ಮನೆಯಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಕಾಂಗ್ರೆಸ್ ಪಕ್ಷ ಯುವಕರಿಗೆ ಅವಕಾಶ ನೀಡುತ್ತಿದೆ ದೇಶದ ಸಮಗ್ರ ಅಭಿವೃದ್ಧಿಗೆ ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾವೆಲ್ಲ ಶ್ರಮಿಸೋಣ ಎಂದು ತಿಳಿದರು.

ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ ಹಿಂದೆ ಪಕ್ಷದ ಸದಸ್ಯತ್ವಗಳನ್ನು ಎಲ್ಲೋ ಒಂದು ಸ್ಥಳದಲ್ಲಿ ಕುಳಿತು ಮಾಡಿ ಕಳುಹಿಸಿ ಬಿಡುವ ಕೆಲಸ ನಡೆಯುತ್ತಿತ್ತು ಆದರೆ ಡಿ.ಕೆ ಶಿವಕುಮಾರ್ ಅವರು ದೇಶದ ಪ್ರತಿಯೊಬ್ಬರ ಮನೆ-ಮನೆಗೆ ತಲುಪಿ ಅವರಿಗೆ ಪಕ್ಷದ ಅಭಿವೃದ್ಧಿ ಕಾರ್ಯಗಳ ತಿಳಿಸಿ ಸದಸ್ಯತ್ವ ಮಾಡಿಕೊಳ್ಳುವ ಕಾರ್ಯ ಆರಂಭಿಸಿದ್ದಾರೆ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳೋಣ ಎಂದರು. ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಸಂಗನಗೌಡ ಪಾಟೀಲ, ನಿಂಗಪ್ಪ ಅರಕೇರಿ ಸದಸ್ಯತ್ವ ಅಭಿಯಾನದ ಕುರಿತು ಹಮ್ಮಿಕೊಂಡಿರುವ ಕಾರ್ಯಗಳು, ಸದಸ್ಯತ್ವ ಮಾಡಿಕೊಳ್ಳುವ ದಾಖಲೆಗಳ ಮುಖ್ಯ ಸಂಗ್ರಾಹಕರು ಮಾಡುವ ಕಾರ್ಯಗಳ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಂಜುನಾಥ ಶಿಡ್ಲವ್ವಗೋಳ, ಸುಭಾಷ ರೂಮೋಜಿ, ಬಸವರಾಜ ಉಳ್ಳಾಗಡ್ಡಿ, ಮಹಾದೇವಿ ಕೋಟಗಿ, ಜಯಲಕ್ಷ್ಮಿ ಮಾಡಮ್ಮಗೇರಿ, ಗಂಗವ್ವ ತಳವಾರ, ಮಹಾಂತೇಶ ನಂದೇನ್ನವರ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು. ಕೃಷ್ಣಾಜಿ ಕುಲಕರ್ಣಿ ನಿರೂಪಿಸಿ ವಂದಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";