ಅಕ್ಷರ ಮಾಂತ್ರಿಕ ಬೆಳಗಾವಿಯಿಂದ ಕಾರವಾರಕ್ಕೆ ಪ್ರಮೋದ್ ಹರಿಕಾಂತ ವರ್ಗಾವಣೆ.:

ಬೆಳಗಾವಿ (ಅ.17)ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಒಂದಾದ ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಾಮಾಣಿಕ ನೇರ ನುಡಿಯ ನಿಷ್ಪಕ್ಷಪಾತ ವರದಿಗಾರ ಪ್ರಮೋದ್ ಹರಿಕಾಂತ್. ಕಳೆದ ಆರು ವರ್ಷಗಳಿಂದ ಬೆಳಗಾವಿ ಆವೃತ್ತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಈಗ ಅವರದೇ ಸ್ವಂತ ಜಿಲ್ಲೆಯಾದ ಕಾರವಾರಕ್ಕೆ ವರ್ಗಾವಣೆ ಆಗಿದ್ದಾರೆ.

ಪ್ರಮೋದ್ ಅವರು ಬರೆದಿರುವ ಹಲವಾರು ಸುದ್ದಿ ಲೇಖನಗಳು ಬೆಳಗಾವಿ ಜಿಲ್ಲಾಯಾದ್ಯಂತ ಸಾಕಷ್ಟು ಪ್ರಭಾವ ಬೀರಿವೆ.ಮೂಲಸೌಕರ್ಯಗಳ ಬಗ್ಗೆ ಬರೆದಿರುವ ಲೇಖನ ಸುದ್ದಿಗಳು ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ತಲುಪಿ ಅಭಿವೃದ್ಧಿ ಕಾರ್ಯ ಆಗಿವೆ.

ಬೆಳಗಾವಿಯ ವಿಮಾನ ನಿಲ್ದಾಣ ರಸ್ತೆ ಅಗಲೀಕರಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಉಡಾನ್, ಕೃಷಿ ಉಡಾನ್, ಜಿಲ್ಲಾಸ್ಪತ್ರೆಗೆ ಮೂಲಸೌಕರ್ಯ, ಬಿಮ್ಸ್ ಗೆ ಹೆಚ್ಚಿನ ಕೋರ್ಸ್, ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರ, ಬಸ್ ಸೌಲಭ್ಯ, ಕೇಂದ್ರ ಬಸ್ ನಿಲ್ದಾಣ ಸ್ಥಿತಿಗತಿ, ಬೆಳಗಾವಿಯ ಮೃಗಾಲಯದ ಮಾಹಿತಿ. ಹೀಗೆ ನೂರಾರು ವಿಷಯಗಳ ವಿಶೇಷ ಲೇಖನ ಬರೆದು ಈ ಭಾಗದ ಓದುಗರ ಹಾಗೂ ಜನರ ಮನಗೆದ್ದು ಅಭಿವೃದ್ಧಿಗೆ ಬೆಳಕು ಚೆಲ್ಲಿದ್ದಾರೆ.

ಇವರು ಇನ್ನು ಕಾರವಾರದ ಆವೃತ್ತಿಯಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಲಿದ್ದಾರೆ. ಬೆಳಗಾವಿಗೆ ಇಂತಹ ನಿಷ್ಪಕ್ಷಪಾತ ವರದಿಗಾರ ಅವಶ್ಯಕತೆ ಇದ್ದು, ಇವರು ಆದಷ್ಟು ಬೇಗ ಮತ್ತೆ ಬೆಳಗಾವಿಗೆ ಬರಲಿ ಎಂದು ಆಶಿಸುತ್ತಾ.. ನಮ್ಮ ಬೆಳಗಾವಿ ಜನತೆಯ ಪರವಾಗಿ ಅನಂತ ಶರಣು ಶರಣಾರ್ಥಿಗಳೊಂದಿಗೆ ವಂದನೆಗಳು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";