Sunday, September 22, 2024

ದೃಶ್ಯ ಸಿನಿಮಾ 10 ಸಲ ನೋಡಿ ಕೊಲೆ! ಹೆಂಡತಿ, ಮಗಳು, ಆಕೆಯ ಲವರ್ ಅರೆಸ್ಟ್.

ಬೆಳಗಾವಿಯಲ್ಲಿ ನಡೆದ ಭೀಕರ ಕೊಲೆ‌ ಕೇಸ್ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರು. ಅನೈತಿಕ ಸಂಬಂಧ ಲವ್ವಿ ಡವ್ವಿಗೆ ಅಡ್ಡಿಯಾಗಿದ್ದ ತಂದೆಗೆ ಸ್ಕೆಚ್ ಹಾಕಿದ್ದು ಹಂಡತಿ ಮತ್ತು ಮಗಳು ಎಂಬ ಸತ್ಯ ಬಹಿರಂಗವಾಗಿದೆ. ಗಂಡನ ಕೊಲೆ ಮಾಡಲು ಕನ್ನಡದ ಪ್ರಖ್ಯಾತ ಸಿನಿಮಾ ದೃಶ್ಯಂ 10 ಸಲ ನೋಡಿದ್ರು. ಬಳಿಕ ತಡರಾತ್ರಿ ಹೆಂಡತಿ, ಮಗಳು, ಹಾಗು ಮಗಳ ಲವರ್ ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಸ್ಕೆಚ್​ ರೋಚಕವಾಗಿದ್ದು ಮೂರು ಜನ ಸೇರಿ ಆಡಿದ ನಾಟಕ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಸೆಪ್ಟೆಂಬರ್ 17ರಂದು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಏಜೆಂಟನ ಬರ್ಬರ ಹತ್ಯೆಯಾಗಿತ್ತು. 57 ವರ್ಷದ ಸುಧೀರ್ ಕಾಂಬಳೆ ಅನ್ನುವ ವ್ಯಕ್ತಿಯ ಕತ್ತು, ಹೊಟ್ಟೆ, ಕೈ, ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದು ಕೊಲೆಮಾಡಲಾಗಿತ್ತು.

ಬೆಳಗಾವಿಯ ಕ್ಯಾಂಪ್ ಪ್ರದೇಶದ ಮದ್ರಾಸ್ ಸ್ಟ್ರೀಟ್‌ನಲ್ಲಿರುವ ಮನೆಯ ಮೇಲ್ಮಹಡಿಯ ಕೋಣೆಯಲ್ಲಿ ಸುಧೀರ್ ಕಾಂಬಳೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದ. ಸ್ಥಳಕ್ಕೆ ಕ್ಯಾಂಪ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಕುಟುಂಬಸ್ಥರನ್ನು ವಿಚಾರಿಸಿದಾಗ ತಾವು ಕೆಳಮಹಡಿಯಲ್ಲಿ ಮಲಗಿದ್ದಾಗಿ ಹಂಡತಿ ಇಬ್ಬರು ಮಕ್ಕಳು ಹೇಳಿದ್ದರು.

ಕೊಲೆಯಾದ ಸುಧೀರ್ ಹಂಡತಿ ರೋಹಿಣಿ ಕಾಂಬಳೆ, ಮಗಳು ಸ್ನೇಹಾ ಕಾಂಬಳೆ, ಪುತ್ರಿಯ ಪ್ರಿಯಕರ ಅಕ್ಷಯ್‌ನನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸುತ್ತಾರೆ. ಇಂಟ್ರೆಸ್ಟಿಂಗ್ ಸ್ಟೋರಿ ಅಂದ್ರೆ ಕೊಲೆಗೂ ಮುನ್ನ ಮೊಬೈಲ್‌ನಲ್ಲಿ ಲಿಂಕ್ ಶೇರ್ ಮಾಡಿ ಮೂವರು ದೃಶ್ಯ ಸಿನಿಮಾ ನೋಡಿರುತ್ತಾರೆ. ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸಿರುತ್ತಾರೆ.‌

ಮಹಾರಾಷ್ಟ್ರದ ಪುಣೆಯಲ್ಲಿ ಹೋಟೆಲ್‌ವೊಂದರಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದ ಆರೋಪಿ ಅಕ್ಷಯ್‌ ವಿಠಕರ್‌ಗೆ ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡ್ತಿದ್ದ ಸುಧೀರನ ಮಗಳು ಸ್ನೇಹಾ ಪರಿಚಯ ಆಗಿರುತ್ತೆ. ತನಗೆ ಮದುವೆಯಾಗಿ ಒಂದು ಮಗು ಇದ್ದರೂ ಸ್ನೇಹಾ ಜೊತೆ ಅಕ್ಷಯ್ ಲವ್ವಿಡವ್ವಿ ಶುರುವಿಟ್ಟು ಕೊಂಡಿರುತ್ತಾನೆ.

ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡ್ತಿದ್ದ ಕೊಲೆಯಾದ ಸುಧೀರ್ ಕಾಂಬಳೆ ಕೋವಿಡ್ ಮೊದಲನೇ ಅಲೆಯಲ್ಲಿ ಮರಳಿ ತವರೂರಿಗೆ ಬಂದು ನೆಲೆಸಿರುತ್ತಾರೆ. ಬಳಿಕ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಸೇರಿ ಇತರೆ ಕೆಲಸ ಮಾಡ್ತಿದ್ದ ಸುಧೀರ್ ಕಳೆದ ಎರಡು ವರ್ಷಗಳಿಂದ ಹೆಂಡತಿ ಮತ್ತು ಮಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ.

ಯಾವುದೇ ಕೆಲಸ ಮಾಡಬೇಕಿದ್ದರೂ ಅಡ್ಡಿ ಬರುತ್ತಿದ್ದ ಎಂದು ಕೊಲೆಗೆ ಸ್ಕೆಚ್ ಹಾಕಿದ್ವಿ ಎಂದು ಕೊಲೆಯಾದ ಸುಧೀರ್ ಹೆಂಡತಿ ರೋಹಿಣಿ, ಮಗಳು ಸ್ನೇಹಾ ಹೇಳಿದ್ದಾರೆ. ಕೊಲೆ ಮಾಡಿದ ಬಳಿಕ ಯಾವುದೇ ಸಾಕ್ಷ್ಯ ಸಿಗಬಾರದೆಂದು ಪ್ಲ್ಯಾನ್ ಮಾಡಿದ್ದ ಮೂವರು ಪುಣೆಯಲ್ಲೇ ಪ್ರಿಯಕರನ ಜೊತೆಗೂಡಿ ತಂದೆಯ ಹತ್ಯೆಗೆ ಸ್ಕೆಚ್ ಹಾಕಿರುತ್ತಾಳೆ.

ಸೆಪ್ಟೆಂಬರ್ 17ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆ ಬಳಿ ಬಂದಿದ್ದ ಅಕ್ಷಯ್‌ನ್ನು ಹಿಂಬದಿ ಬಾಗಿಲು ಓಪನ್ ಮಾಡಿ ಮನೆಯೊಳಗೆ ಕರೆಸಿಕೊಂಡಿರುತ್ತಾಳೆ ರೋಹಿಣಿ‌. ಬಳಿಕ ಮನೆಗೆ ನುಗ್ಗಿ ಮೇಲ್ಮಹಡಿಗೆ ತೆರಳಿ ಸುಧೀರ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದಾಗ ಸುಧೀರ್ ತೀವ್ರ ಪ್ರತಿರೋಧವೊಡ್ಡಿರುತ್ತಾನೆ.

ಈ ವೇಳೆ ಹಂತಕ ಅಕ್ಷಯ್‌ನ ಕೈ ಬೆರಳುಗಳು ಕಟ್ ಆಗಿ ಗಾಯವಾಗುತ್ತೆ‌‌. ಆದರೂ ಬಿಡದೇ ಅದೇ ಚಾಕುವಿನಿಂದ ಹೊಟ್ಟೆ, ಕತ್ತು ಭಾಗಕ್ಕೆ ಇರಿದು ಸುಧೀರ್ ಹತ್ಯೆ ಮಾಡಿರುತ್ತಾನೆ. ಸುಧೀರ್ ಹತ್ಯಗೈದು ಲಾಡ್ಜ್‌ಗೆ ಮರಳಿ ಚೆಕ್‌ಔಟ್ ಮಾಡಿ ಪುಣೆಗೆ ತೆರಳಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾನೆ.

ಈ ವೇಳೆ ಬೆರಳುಗಳಿಗೆ ಗಂಭೀರ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದಾಗ ಪುಣೆಯ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗ್ತಾನೆ. ತಂದೆ ಸುಧೀರ್ ಕೊಲೆಯಾಗಿದ್ದು ಕನ್ಫರ್ಮ್ ಆಗುತ್ತಿದ್ದಂತೆ ಪುಣೆಯಿಂದ ಬೆಳಗಾವಿಗೆ ಬಂದಿದ್ದ  ಸ್ನೇಹಾ ಬಳಿಕ ಏನೂ ಗೊತ್ತೆ ಇಲ್ಲದ ರೀತಿ ತಾಯಿ ಜೊತೆ ನಾಟಕವಾಡಿರುತ್ತಾರೆ.

ಆದ್ರೆ ಈ ವಿಷಯ ಸುಧೀರ್‌ನ ಮತ್ತೋರ್ವ ಪುತ್ರಿ, ಪುತ್ರನಿಗೆ ಗೊತ್ತೇ ಇರಲ್ಲ. ಯಾರೋ ಹಿಂಬದಿ ಬಾಗಿಲಿನಿಂದ ನುಗ್ಗಿ ಗಂಡನ ಕೊಲೆ ಮಾಡಿದ್ದಾಗಿ ನಾಟಕವಾಡುತ್ತಿದ್ದ ತಾಯಿ ಮಗಳು, ಮಗಳ ಪ್ರಿಯಕರನ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು ಕೊಲೆ ರಹಸ್ಯ ಬಯಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!