Thursday, July 25, 2024

ಮರೆಯಲಾಗದ ಮಹಾನುಭಾವರು:ಸರ್.ಸಿದ್ದಪ್ಪ ಕಂಬಳಿಯವರು

ಮಹಾರಾಷ್ಟ್ರದಲ್ಲಿ ಜ್ಯೋತಿ ಬಾ ಪುಲೆ ಹಾಗೂ ಮಾತೆ ಸಾವಿತ್ರಿ ಬಾ ಪುಲೆಯವರು ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಕಾರಿ ಕೆಲಸ ಮಾಡಿದಂತೆ ಕರ್ನಾಟಕದಲ್ಲಿ ಅವರ ಪಾತ್ರ ನಿರ್ವಹಿಸಿದವರು ಸರ್ ಸಿದ್ದಪ್ಪ ಕಂಬಳಿಯವರು ಮತ್ತು ಅವರ ಸಮಕಾಲಿನವರು.
ಇಂದು ಸೆಪ್ಟೆಂಬರ್ 11 ಸರ್. ಸಿದ್ದಪ್ಪ ಕಂಬಳಿಯವರ ಜನ್ಮದಿನ. ಈ ಮರೆಯಲಾಗದ ಮಹಾನುಭಾವರ ಜನ್ಮದಿನದಂದು,ಅವರ ಸಾಧನೆಯನ್ನು ಅವಲೋಕಿಸಲು ಇದೂಂದು ಸಂದರ್ಭ.
1882 ರಲ್ಲಿ ಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಸೆಪ್ಟೆಂಬರ 11 1882ರಲ್ಲಿ ಸಿದ್ದಪ್ಪ ಕಂಬಳಿಯವರು ಹುಟ್ಟಿದರು. ತಂದೆ ಕಂಬಳಿ ಮಾರುವ ವೃತ್ತಿಯಾದ ಕಾರಣ ಕಂಬಳಿಯೆಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು.
ಪುಣೆಯ ಡೆಕ್ಕನ್ ಕಾಲೇಜಿನಲ್ಲಿ B.A.ಪದವಿಯನ್ನು 1904ರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸರಕಾರ ನೌಕರಿ ಸಿಗುವುದಾದರೂ ಜೀ ಹುಜುರ ಅನ್ನಬೇಕಾದ ಹುದ್ದೆ ಬೇಡವೆಂದು ಕಾನೂನು ಅಧ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳಸಿದರು. ಕಾನೂನು ಪರೀಕ್ಷೆಯಲ್ಲಿ ಇಡಿ ಮುಂಬೈರಾಜ್ಯ ಕ್ಕೆ ಪ್ರಥಮರಾಗಿ ಉತ್ತೀರ್ಣರಾದರು..

ಸಿದ್ದಪ್ಪ ಕಂಬಳಿಯವರ ವಕಾಲತ್ತಿನ ಪ್ರತೀತಿ ಅರಿತ ಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮದೋಂದು ಕೇಸು ಪ್ರೀವಿವ್ ಕೌನ್ಸಿಲ್ ಎದುರು ಹೋದಾಗ ಕಂಬಳಿಯವರನ್ಬು ಲಂಡನ್ ಗೆ ಕಳುಹಿಸಲು ಆಲೋಚಿಸಿದಾಗ ಆಗ ಮೊದಲ ಮಹಾಯುದ್ದದ ಕಾರಣ ಪ್ರಯಾಣ ಅಪಾಯಕಾರಿ ಎಂದು ವಿಚಾರವನ್ನು ಕೈ ಬಿಟ್ಟರು ಲಿಂಗರಾಜ ದೇಸಾಯಿಯವರು. 1917ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921ನಗರಸಭೆ ಅಧ್ಯಕ್ಷರಾಗಿ, ಅದೇ ಕಾಲಕ್ಕೆ ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಬೋರ್ಡ ಸದಸ್ಯ ರಾಗಿ, ಮುಂಬೈ ವಿಧಾನ ಪರಿಷತನ ಸದಸ್ಯರಾಗಿ ಆಯ್ಕೆಯಾದರು. 1924ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿ ಯಾಗಿ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದರು.

ಧಾರವಾಡ ದಲ್ಲಿ ಡೆಪ್ಯುಟಿ ಚನ್ನಬಸಪ್ಪ ನವರು ಸ್ಥಾಪಿಸಿದ ಶಿಕ್ಷಕರ ಟ್ರೆನಿಂಗ ಕಾಲೇಜು ಮತ್ತು ಅರಟಾಳ ರುದ್ರಗೌಡ್ರು ಸ್ಥಾಪಿಸಿದ KCD ಕಾಲೇಜುನ್ನು ಬ್ರಿಟಿಷ್‌ ಸರಕಾರ ಆರ್ಥಿಕ ಮಿತವ್ಯಯದ ನೆಪದಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ ಏಕಾಂಗಿ ವೀರರಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸಿ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು ಸರ ಸಿದ್ದಪ್ಪ ಕಂಬಳಿಯವರು.

ಕರ್ನಾಟಕ ಏಕೀಕರಣ ಪರಿಷತ್ತಿನ ಪ್ರಥಮ ಮತ್ತು 1926 ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದರು ಸರ ಸಾಹೇಬರು.

1920 ರಲ್ಕಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಬೃಹತ್ ಸಮಾವೇಶ ಹಮ್ಮಿಕೂಂಡರು..ಇದರ ಮುಖ್ಯ ಅಥಿತಿಗಳು ಛತ್ರಪತಿ ಶಾಹುಮಾಹಾಜರು. ಇದರ ಸಾನಿಧ್ಯವನ್ನು ಹುಬ್ಬಳ್ಳಿಯ ಸಿದ್ದಾರೂಢ ಶ್ರೀ ಗಳು ವಹಿಸಿದ್ದರು

1924 ರ ಕಾಂಗ್ರೆಸ ಅಧಿವೇಶನ ದ ಅಧ್ಯಕ್ಷತೆ ವಹಿಸಲು ಗಾಂಧಿ ಜೀ ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದ ಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಬೇಟಿ ಮಾಡಿಸಿ ಎಂದರು ಗಾಂಧಿಯವರು… ಇದರಿಂದ ಸಿದ್ದಪ್ಪ ಕಂಬಳಿಯವರ  ವ್ಯೆಕ್ತಿತ್ವದ ಮಹತ್ವ ಅರಿವಾಗದೇ ಇರುವುದು…
ಅಂಬೇಡ್ಕರ ಅವರು ಬ್ಯಾರಿಸ್ಟರ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು.1932 ಪುಣಾ actನಲ್ಲಿ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು.

1924 ರ ಕಾಂಗ್ರೆಸ ಅಧಿವೇಶನ ದ ಅಧ್ಯಕ್ಷತೆ ವಹಿಸಲು ಗಾಂಧಿಜಿ ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಭೇಟಿ ಮಾಡಿಸಿ ಎಂದರು ಗಾಂಧಿಯವರು. ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಮಹತ್ವ ಅರಿವಾಗದೇ ಇರದು.

1930ರಲ್ಲಿ ಲಂಡನಿನಲ್ಲಿ ಜರುಗುವ ದುಂಡು ಮೇಜಿನ ಪರಿಷತ್ತಿಗೆ ಅಹ್ವಾನ ಬಂದಿತು. ಆದರೆ ಅದಕ್ಕೆ ಹಾಜರಾಗಲಿಲ್ಲಾ. ಅದೇ ವರ್ಷ ನವೆಂಬರ್ ನಲ್ಲಿ ಸರ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು. ಇದು ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಪ್ರಪ್ರಥಮವಾಗಿ ಮಂತ್ರಿಯಾದದ್ದು.

ಅಂಬೇಡ್ಕರ ಅವರು ಬ್ಯಾರಿಸ್ಟರ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು. 1932 ಪುಣಾ actನಲ್ಲಿ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗಾವಲಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು.

1937 ರಲ್ಲಿ ಮುಂಬಯಿ ವಿಧಾನ ಸಭೆಗೆ ಚುಣಾವಣೆ ನಡೆದಾಗ ಸರ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಬಾಷಣ ಮಾಡಿದವರು ಜವಹರಲಾಲ ನೆಹರು ಮತ್ತು ಸರದಾರ ವಲ್ಲಭಭಾಯಿ ಪಟೇಲ್ ಅವರು. ಆದರೆ ಪಲಿತಾಂಶ ಮಾತ್ರ ಸರ ಸಿದ್ದಪ್ಪ ಕಂಬಳಿಯವರದ್ದಾಗಿತ್ತು.

ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಅನುಮತಿ ನೀಡಲು ಪುಣಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೀನ ಮೇಷ ಏಣಿಸುವಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜ ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದರು ಸಿದ್ದಪ್ಪ ಕಂಬಳಿಯವರು.

ಶಿಕ್ಷಣ ಮಂತ್ರಿಗಳಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತಲೆ ಎತ್ತಿ ನಿಲ್ಲಿಸಲು ಕಾರಣರಾದವರು ಸರ ಸಿದ್ದಪ್ಪ ಕಂಬಳಿಯವರು.

ಅಂಬೇಡ್ಕರ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ, ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಪ್ರಸ್ತಾಪಿಸಿದಾಗ, ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅಂಬೇಡ್ಕರ್ ಅವರಿಗೆ ಅವಕಾಶ ಒದಗಿಸಿ ಅಂಬೇಡ್ಕರ್ ಅವರ ಪ್ರತಿಭೆಗೆ ಭೂಮಿಕೆ ಒದಗಿಸಿಕೂಟ್ಟರು.

ಪ್ರತ್ಯೇಕ ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಅಂಬೇಡ್ಕರ ಅವರ ಹೆಜ್ಜೆ ಹಜ್ಜೆಗೂ ಸರ ಸಿದ್ದಪ್ಪ ಕಂಬಳಿಯವರೂಂದಿಗೆ ಸಮಾಲೋಚನೆ ಮಾಡಿರುವುದು ಐತಿಹಾಸಿಕ.

930ರಲ್ಲಿ ಸರ ಸಿದ್ದಪ್ಪ ಕಂಬಳಿಯವರಿಗೆ “ಜಸ್ಟಿಸ್ ಆಫ್ ಪೀಸ್” ಪ್ರಶಸ್ತಿ ಬಂದಿತು. ಇದನ್ನು ಪಡೆದ ಮೊದಲ ಕನ್ನಡಿಗರು. 1939ರಲ್ಲಿ ಸರಕಾರ ಇವರಿಗೆ ಸರ್ ಪ್ರಶಸ್ತಿ ನೀಡಿಗೌರವಿಸಿತು.

ಸರದಾರ ವಲ್ಲಭಭಾಯಿ ಪಟೇಲ್ ಅವರು ಕಂಬಳಿಯವರ ಮುಂಗೈ ಹಿಡಿದು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದರೂ ಸಹಿತ ತಮ್ಮ ಮಾತೃ ಪಕ್ಷಕೆ ನಿಷ್ಠೆ ತೋರಿಸಿದರು.

ಇಂತಹ ಸಾಧನಗೈದ ಕರ್ನಾಟಕದ ಹೆಮ್ಮೆಯ ಪ್ರತೀಕ ಈ ಮರೆಯಲಾಗದ ಮಹಾನುಭಾವರ ಜನ್ಮದಿನದಂದು ಗೌವರಪೂರ್ಣ ನಮನಗಳು.

 

ಲೇಖಕರು:ಮಹೇಶ.ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
M-9740313820

ಜಿಲ್ಲೆ

ರಾಜ್ಯ

error: Content is protected !!