Saturday, July 27, 2024

ರೌಡಿಸಂ ನಲ್ಲಿ ಹವಾ ಮೆಂಟೇನ್ ಮಾಡಬೇಕಂತ ಯುವಕನ ಚಟ್ಟ ಕಟ್ಟಿದ ಹುಡುಗರು

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಕೊಲೆಗೆ ಸ್ಕೇಚ್ ಹಾಕಿ ನಾಡ ಪಿಸ್ತೂಲ್ ದಿಂದ ಫೈಯರ್ ಮಾಡಿ ಜೈಲು ಕಂಬಿ ಎನಿಸಿ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದು ಹುಟ್ಟು ಹಬ್ಬ ಆಚರಿಸಿಕೊಂಡು ಗೆಳೆಯರಿಗೆ ಬರ್ತಡೆ ಪಾರ್ಟಿ ಕೊಡಲು ಹೋಗಿದ್ದಾತ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ರೌಡಿಸಂ ನಲ್ಲಿ ಹೆಸರು ಮಾಡಬೇಕು ಮತ್ತು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ.  ಜಗತ್ತಲ್ಲಿ ಯಾವ್ಯಾವುದೋ ಕಾಣರಕ್ಕೆ ಕೊಲೆ ಆಗುತ್ತಲೇ ಇರುತ್ತವೆ. ಅದರಲ್ಲೂ ಹೆಣ್ಣು, ಹೊಣ್ಣು ಮಣ್ಣಿಗೋಸ್ಕರವೇ ಹೆಣಗಳು ಬೀಳೋದು ಸಹಜ, ಆದರೆ ಇಲ್ಲೊಂದು ಇನ್ನು ಸರಿಯಾಗಿ ಮೀಸೆ ಚಿಗುರದ ಯುವಕರ ಗುಂಪು ಹಳೆ ವೈಷ್ಯಮ್ಯಕ್ಕೆ ಹಾಗೂ ರೌಡಿಸಂ ನಲ್ಲಿ ಹವಾ ಮೆಂಟೇನ್ ಮಾಡಬೇಕು ಅಂತಾನೆ ಯುವಕನೋರ್ವನಿಗೆ ಚಟ್ಟ ಕಟ್ಟಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸರ್ವಿಜಸ್ ರೋಡ್ ಬಳಿಸಿಕೊಂಡು  ಸೆ.4ರ ರಾತ್ರಿ ತನ್ನ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದ ವಿನಾಯಕ ಹರಕೇರಿ (28) ಎಂಬ ಯುವಕನನ್ನ ಅಡ್ಡಗಟ್ಟಿದ್ದ ಐವರ ತಂಡ ಅವನ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿತ್ತು.

ತೀವ್ರವಾಗಿ ಹಲ್ಲೆ ಆಗಿದ್ದರಿಂದ ವಿನಾಯಕ ಸ್ಥಳದಲ್ಲಿಯೇ  ಸಾವನ್ನಪ್ಪಿದ್ದ ಸ್ಥಳಕ್ಕೆ ದಾವಿಸಿದ್ದ ಯಮಕನಮರಡಿ ಪೊಲೀಸರು ಸ್ಥಳ ಮಹಜರು  ನಡೆಸಿ  ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದು ಕೇವಲ ಐದು ದಿನಗಳಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಗುರವ್,ಈರಣ್ಣ ಹಿನ್ನಕ್ಕನವರ್,ಆದಿತ್ಯ ಗಣಾಚಾರಿ, ಮಹಾಂತೇಶ ಕರಗುಪ್ಪಿ, ಶಾನೂರ ನದಾಫ್ ಎಂಬ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನು ಕೊಲೆಯಾದ ವಿನಾಯಕ ಸಹ ಕಳೆದ 2 ವರ್ಷದ ಹಿಂದೆ ನಾಡಪಿಸ್ತೂಲಿನಿಂದ ಸತೀಶ್ ಜಾರಕಿಹೊಳಿ‌ ಆಪ್ತ ಭರಮಾ ಧುಪದಾಳೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿ ಅದೇ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿ ಬೇಲ್ ಮೇಲೆ ಹೊರಗಿದ್ದ. ಸದ್ಯ ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದ್ದು ಐವರನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಬರ್ತಡೇ ಪಾರ್ಟಿ ಮುಗಿಸಿ ಹೋಗುತ್ತಿದ್ದಾಗ ಕೊಲೆ ಆದ:
ವಿನಾಯಕ ತನ್ನ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದಾಗ ಆತನ ಬೈಕ್ ಅಡ್ಡಹಾಕಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.  ಇನ್ನೂ ಮದುವೆಯಾಗದ ಈ ವಿನಾಯಕ ಒಬ್ಬನೇ ಮಗನಿದ್ದು ಯಾವುದೇ ಕೆಲಸ ಕಾರ್ಯಗಳನ್ನ ಮಾಡುತ್ತಿರಲಿಲ್ಲ‌. ಇನ್ನೂ ಕಳೆದ ವರ್ಷ ಇದೇ ವಿನಾಯಕ ಇಡೀ ಜಿಲ್ಲೆಯಲ್ಲೇ ಮಾಡಬಾರದ ಕೆಲಸ ಮಾಡಿ ಸುದ್ದಿಯಾಗಿದ್ದ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ಭರಮಾ ದೂಪದಾಳೆ ಎಂಬುವವರ ಮೇಲೆ ನಾಡ ಪಿಸ್ತೂಲ್ ದಿಂದ ಪೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿದ್ದ.  ಭರಮಾ ದೂಪದಾಳೆ ಅಂದು ಬದುಕುಳಿದಿದ್ದ, ವಿನಾಯಕ  ಅರೆಸ್ಟ್ ಆಗಿ ಹಿಂಡಲಗಾ ಜೈಲು ಸೇರಿದ‌‌.

ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರ ಬಂದಿದ್ದ ಈತ ಕೆಲಸ ಕಾರ್ಯ ಇಲ್ಲದೇ ಊರಲ್ಲಿ ಯುವಕರ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದ. ಶನಿವಾರದಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಈತ  ಸ್ನೇಹಿತರು ಪಾರ್ಟಿ ಕೇಳಿದ್ರೂ ಅಂತಾ ಹತ್ತರಗಿ ಬಳಿ ದಾಬಾಕ್ಕೆ ಪಾರ್ಟಿ ಕೊಡಿಸಿ ವಾಪಾಸ್ ಯಮಕನಮರಡಿಗೆ ಬರುವಾಗ ಈತನನ್ನ ಹಿಂಬಾಲಿಸಿದ ದುಷ್ಕರ್ಮಿಗಳು ರಸ್ತೆ ಮಧ್ಯದಲ್ಲಿ ಈತನನ್ನ ಅಡ್ಡಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

 

 

 

 

 

 

 

(suvrnatv)

ಜಿಲ್ಲೆ

ರಾಜ್ಯ

error: Content is protected !!