Tuesday, September 17, 2024

ಏಪ್ರಿಲ್ 6 ರಂದು ಕಿತ್ತೂರಿನಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಶಕುಂತಲಾ ಗ್ರಾಮೀಣ ಆಸ್ಪತ್ರೆ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-04-2022 ರಂದು ಮುಂಜಾನೆ 9:30 ರಿಂದ ಮದ್ಯಾಹ್ನ 2:30 ರ ವರೆಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರ ನಡೆಯುತ್ತದೆ ಎಂದು ಶಕುಂತಲಾ ಗ್ರಾಮೀಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು, ಖ್ಯಾತ ನೇತ್ರ ತಜ್ಞರಾದ ಡಾ. ಎಮ್ ಎಸ್ ಹೊತ್ತಗಿಮಠ ಅವರು ತಿಳಿಸಿದ್ದಾರೆ.

ಉಚಿತ ಶಿಬಿರದಲ್ಲಿ ರಕ್ತದ ಒತ್ತಡ (ಬಿಪಿ), ಇಲೆಕ್ಟ್ರೋಕಾರ್ಡಿಯೋಗ್ರಾಫ್ (ಇಸಿಜಿ), 2 ಡಿ ಇಕೋ ಕಾರ್ಡಿಯೋಗ್ರಾಫಿ (2 ಡಿ ಇಕೋ) ಸೌಲಭ್ಯ ಮತ್ತು ನುರಿತ ಹೃದಯ ರೋಗ ತಜ್ಞರ ಜೊತೆ ಸಮಾಲೋಚನೆ ಜರುಗುವುದು ಕಾರಣ ಕಿತ್ತೂರು ಹಾಗೂ ಸುತ್ತಮುತ್ತಲು ಇರುವ ಸಾರ್ವಜನಿಕರು ಈ ಉಚಿತ ಹೃದಯ ರೋಗ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ 9538965956, 9513343246 ಸಂಪರ್ಕ ಸಂಖ್ಯೆಗೆ ಸಂಪರ್ಕ ಮಾಡಬೇಕು ಎಂದು ಡಾ. ಎಮ್ ಎಸ್ ಹೊತ್ತಗಿಮಠ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!