Saturday, October 5, 2024

ಬೆಳಗಾವಿಯಲ್ಲಿ ಮಾರ್ಚ 23 ರಂದು “ಭಾವಬಂಧ” ಕಥಾ ಸಂಕಲನ ಲೋಕಾರ್ಪಣೆ

ಬೆಳಗಾವಿ:22 : ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬುಧುವಾರ ದಿನಾಂಕ 23 ಸಂಜೆ 4.30 ಕ್ಕೆ ನೆಹರು ನಗರದಲ್ಲಿನ ಕನ್ನಡ ಭವನದಲ್ಲಿ ಲಿಂ.ಸೋಮಶೇಖರ ಆರ್ ಪಾಟೀಲ (ಆಸ್ಟ್ರೇಲಿಯಾ) ಅವರು ರಚಿಸಿದ “ಭಾವಬಂಧ” ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಸ್ತ್ರೀರೋಗ ತಜ್ಞೆ ಡಾ.ವನಿತಾ ಮೆಟಗುಡ್ಡ, ಯೋಗಾ ಥಿರ್ಯಾಪಿಸ್ಟ ಡಾ.ವಿಜಯಾ ಸೋ ಪಾಟೀಲ, ಪ್ರಾ.ಆರೋಗ್ಯ ಕೇಂದ್ರ, ವಂಟಮೂರಿ ವೈದ್ಯಾಧಿಕಾರಿ ಡಾ.ಜಯಾನಂದ ಧನವಂತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ರವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾದ್ಯಾಪಕರು ಹಾಗೂ ಹಿರಿಯ ಸಾಹಿತಿ ಗುರುದೇವಿ ಉ ಹುಲೆಪ್ಪನವರಮಠ ಕೃತಿ ಪರಿಚಯ ಮಾಡಲಿದ್ದಾರೆ.

ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷೆ  ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ಕೋರಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!