Saturday, July 27, 2024

ಲಿಂಗಾಯತ ಸಂಘಟನೆಯ ಬಹು ದಿನಗಳ ಬೇಡಿಕೆ ಈಡೇರಿಸಿದ :ಶಾಸಕ ಅನಿಲ ಬೆನಕೆ.

ಬೆಳಗಾವಿ:ಮಾಹಾಂತೇಶ ನಗರದಲ್ಲಿರುವ ಹಳಕಟ್ಟಿ ಭವನಕ್ಕೆ ಕಂಪೌಂಡ್ ಗೊಡೆ, ಶೌಚಾಲಯ, ವ್ಯಾಚ್ ಮೆನ್ ಕೊಠಡಿ ನೀಡುವಂತೆ ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಶಾಸಕ ಅನಿಲ ಬೆನಕೆ ಅವರಿಗೆ ಮನವಿ ಮಾಡಿಕೊಂಡಿದ್ದರು. ‌ಮನವಿ ಸ್ಪಂದಿಸಿ ಇಂದು ಹಳಕಟ್ಟಿ ಭವನಕ್ಕೆ ಹೊಸ ಮೆರಗು ನೀಡುವ ಕಾಮಗಾರಿಗೆ ಚಾಲನೆ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೆಲಸ ಚನ್ನಾಗಿ ಮಾಡಿಸಿಕೊಳ್ಳಿ ಹಾಗೂ ಭವನದ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ಹೇಳಿ ಒಂದು ತಿಂಗಳ ಒಳಗಾಗಿ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ‌

ಈ ವೇಳೆ ಬಸವ ಪ್ರಕಾಶ ಸ್ವಾಮಿಜಿಗಳು, ನಗರ ಸೇವಕರಾದ ರಾಜಶೇಖರ ಡೊಣಿ, ಲಿಂಗಾಯತ ಸಂಘಟನೆಯ
ಪದಾಧಿಕಾರಿಗಳಾದ ಈರಣ್ಣ ದೇಯಣವರ ಅಧ್ಯಕ್ಷರಾದ ಸಂಗಮೇಶ ಅರಳಿ, ಉಪಾಧ್ಯಕ್ಷರಾದ ಸುರೇಶ ನರಗುಂದ, ಕಾರ್ಯದರ್ಶಿ ಪದಾಧಿಕಾರಿಗಳಾದ ಶಶಿಭೊಷಣ ಪಾಟೀಲ್, ವಿಜಯ ಹುದಲಿಮಠ, ರಮೇಶ ಕಳಸಣ್ಣವರ, ಅಶೋಕ ಇಟಗಿ, ಶಂಕರ್ ಶೆಟ್ಟಿ, ಶಂಕರ್ ಗುಡಸ್, ಸತೀಶ್ ಚೌಗುಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!