Saturday, July 27, 2024

ಸಾರ್ಥಕ ಸಮಾಜಸೇವೆ ಮಾಡುತ್ತಿರುವ ಆನಿಗೋಳ ಅಟಲ್ ಜೀ ಅಭಿಮಾನಿ ಬಳಗ

ಬೈಲಹೊಂಗಲ: ಸಮೀಪದ ಆನಿಗೋಳ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮದೇ ಆದ ವಿಶಿಷ್ಟತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗ. ಸೇವೆಯೇ ನಮ್ಮ ಸಂಘಟನೆಯ ಮೂಲ ಉದ್ದೇಶ ಎಂದು ತನು-ಮನ ಧನದಿಂದ ಪ್ರತಿವರ್ಷವೂ ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ಚಿಕ್ಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಸ್ವಚ್ಛತಾ ಅಭಿಯಾನ ಹೀಗೆ ಹಲವಾರು ಸೇವೆಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಪ್ರತಿವರ್ಷ ಪದ್ಧತಿಯಂತೆ ಈ ವರ್ಷವೂ ರಕ್ತದಾನ ಶಿಬಿರದ ಜೊತೆಗೆ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡಿದ್ದು ವಿಶೇಷವಾಗಿತ್ತು 156 ಜನ ನೇತ್ರ ತಪಾಸಣೆ ಯಲ್ಲಿ ಭಾಗವಹಿಸಿ ಅದರಲ್ಲಿ 16 ಜನರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ದೊರಕಿರುವುದು ಸಂತಸದ ವಿಷಯ ಜೊತೆಗೆ 79 ಜನ ರಕ್ತದಾನಿಗಳು ರಕ್ತವನ್ನು ನೀಡಿ ಇನ್ನೊಂದು ಜೀವಕ್ಕೆ ಆಸರೆಯಾದರು. ಎಲ್ಲ ಕಾರ್ಯಗಳ ಹಿಂದೆ ಮುಖಂಡ ಯುವ ಉದ್ಯಮಿ ಸುನೀಲ್ ಮರಕುಂಬಿ ಸಹಕಾರ ಅವಿಸ್ಮರಣೀಯವಾದದ್ದು.

ಈ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗವು ಯುವಪಡೆಯ ಜೊತೆಜೊತೆಗೆ ಹಿರಿಯರು, ಆನಿಗೋಳ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು, ತಾಲೂಕ ಪಂಚಾಯತ್ ಸದಸ್ಯರು, ಗುತ್ತಿಗೆದಾರರು ಅವರಿವರೆನ್ನದೆ ಈ ಅಭಿಮಾನಿ ಬಳಗಕ್ಕೆ ಕೈಜೋಡಿಸಿ ತಮ್ಮದೇಯಾದ ಸೇವೆಯನ್ನು ನಾಡಿಗೆ ಸಮರ್ಪಿಸುತ್ತಿದ್ದಾರೆ.

ಯುವ ಪಡೆ ಹಾಕಿಕೊಳ್ಳುವ ಯೋಜನೆಗೆ ಬಿಜೆಪಿ ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಆನಿಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಸುನಿಲ ಮರಕುಂಬಿ ಯಶಸ್ಸಿನ ರೂವಾರಿ ಆನಿಗೋಳ ಗ್ರಾಮದಲ್ಲಿ ನಡೆಯುತ್ತಿರುವ ಈ ಸೇವೆ ಇನ್ನುಮೇಲೆ ಈ ಭಾಗದ ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ಒದಗಿಸಬೇಕೆಂಬುದು ಅಭಿಮಾನಿ ಬಳಗದ ಮಹದಾಶಯವಾಗಿದೆ.

ನಮ್ಮ ಅಟಲ್ ಜಿ ಅಭಿಮಾನಿ ಬಳಗದ ಜೊತೆಗೆ ಈ ಭಾಗದ ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ಒದಗಿಸುತ್ತಿರುವುದು ಬಹಳಷ್ಟು ಸಂತಸ ತಂದಿದೆ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿ ಈ ನಾಡಿನ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ ನಿಮ್ಮ ಸಹಕಾರ ಆಶೀರ್ವಾದ ಸದಾ ನಮ್ಮ ಬಳಗದ ಮೇಲಿರಲಿ.

ಸುನೀಲ ಮರಕುಂಬಿ . ಜಿಲ್ಲಾ ಸಂಚಾಲಕರು ಬಿಜೆಪಿ ಸಹಕಾರ ಪ್ರಕೋಷ್ಟ.

ಜಿಲ್ಲೆ

ರಾಜ್ಯ

error: Content is protected !!