Thursday, July 25, 2024

ಪರಪುರಷನ ಜತೆ ಸರಸ ಸಲ್ಲಾಪ, ಗಂಡನಿಗೆ ತಿಳಿಯುವ ಮುನ್ನವೇ ಸುಪಾರಿ ನೀಡಿ ಕೊಲೆ

ಹಾಸನ, (ಫೆ.10):  ತನ್ನ ಕಾಮದ ತೀಟೆ ತೀರಿಸಿಕೊಳ್ಳಲು ಕಟ್ಟಿಕೊಂಡ ಗಂಡನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್​ ಬಳಿ ಕಳೆದ ವಾರ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಜ.31ರಂದು ಸಂಜೆ ಶಾಲೆಯಿಂದ ಮಗನನ್ನು ಕರೆತರಲು ಬೈಕ್​ನಲ್ಲಿ ತೆರಳಿದ್ದ ಆನಂದ್​ಕುಮಾರ್​ (42) ಎಂಬಾತನನ್ನು ಕಾವಲು ಹೊಸೂರು ಗೇಟ್​ ಬಳಿ ಅಡ್ಡಗಟ್ಟಿದ ಅಪರಿಚಿತರಿಬ್ಬರು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ಎಸ್​ಪಿ. ಆರ್​.ಶ್ರೀನಿವಾಸ್​ಗೌಡ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಮೃತನ ಪತ್ನಿ ಸುನೀತಾಳ ವಿಚಾರಣೆಗೆ ಮುಂದಾಗುತ್ತಿದ್ದಂತೆ ಭಯಾನಕ ರಹಸ್ಯ ಬಯಲಾಗಿದೆ.

ನುಗ್ಗೇಹಳ್ಳಿಯಲ್ಲಿ ಇದೇ ಗ್ರಾಮದ ನವೀನ್​ ಎಂಬಾತ ಯೋಗ ಕ್ಲಾಸ್ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಯೋಗ ಕ್ಲಾಸ್​ಗೆ ಸುನೀತಾ ಸೇರಿದ್ದಳು. ನವೀನ್​ ಮತ್ತು ಸುನೀತಾ ನಡುವಿನ ಆರಂಭದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು. ಅಕ್ರಮ ಸಂಬಂಧವೂ ಬೆಳೆದಿತ್ತು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಡ್ಡಿಯಾಗುತ್ತಾನೆ ಎಂದು ಆತನ ಕೊಲೆಗೆ ಪತ್ನಿಯೇ ಬೆಂಗಳೂರಿನ ವ್ಯಕ್ತಿಗಳಿಬ್ಬರಿಗೆ ಸುಪಾರಿ ನೀಡಿದ್ದಳು. ಇದಕ್ಕೆ ನವೀನ್​ ಸಹ ಕೈ ಜೋಡಿಸಿದ್ದ. ಆನಂದ್​ ಓಡಾಡುವ ಮಾರ್ಗವನ್ನು ಕೊಲೆಗಡುಕರಿಗೆ ಮಾಹಿತಿ ನೀಡಿದ್ದರು. ಅದರಂತೆ ಜ.31ರಂದು ಆನಂದ್​ನನ್ನು ಕೊಲೆ ಮಾಡಲಾಗಿತ್ತು.

2014ರಲ್ಲಿ ಹಿರೀಸಾವೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇದೇ ಸುನೀತಾಳನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದಳು. ಇದೀಗ ಗಂಡನ ಕೊಲೆ ಕೇಸ್​ನಲ್ಲಿ ಪ್ರಿಯಕರನ ಜತೆ ಸುನೀತಾ ಜೈಲು ಸೇರಿದ್ದಾಳೆ. ಸುಪಾರಿ ಪಡೆದು ಹತ್ಯೆ ಮಾಡಿದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!