Wednesday, July 24, 2024

ಶಿವ ಶರಣ ಮಾದರ ಚೆನ್ನಯ್ಯ ನವರ ಜಯಂತಿ ಆಚರಣೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

ಕಲಬುರಗಿ:- ಶಿವಶರಣ ಮಾದರ ಚೆನ್ನಯ್ಯ ನವರ ವದು ವರರ ಮಾಹಿತಿ ಕೇಂದ್ರ ವತಿಯಿಂದ ಇಂದು ಹೊಸ್ತಿಲ ಹುಣ್ಣಿಮೆ ಸಂದರ್ಭದಲ್ಲಿ ಶಿವ ಶರಣ ಮಾದರ ಚೆನ್ನಯ್ಯ ನವರ ಜಯಂತಿಯ ಅಭಿನಂದನಾ ಸಮಾರಂಭ ಸರಳ ರೀತಿಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸೇಡಂ ತಾಲೂಕಿನ ತಂಡ ಅಲಿಗೆಯ ನಾದದ ಮುಖಾಂತರ ಮೆರವಣಿಗೆ ಮಾಡಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ನಿಂಗಮ್ಮ ಕಟ್ಟಿಮನಿ ಇವರಿಗೆ ಮಾದರ ಚೆನ್ನಯ್ಯ ವದು ವರಾರ ಮಾಹಿತಿ ಕೇಂದ್ರ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರು ಲಿಂಗರಾಜು ತಾರಾಪೈಲ್ ಸೇರಿದಂತೆ ಅನೇಕ ಗಣ್ಯರು ಹಿರಿಯರು ಇದ್ದರು.

 

ಜಿಲ್ಲೆ

ರಾಜ್ಯ

error: Content is protected !!