Thursday, July 25, 2024

ಚನ್ನಬಸವಣ್ಣ ಲಂಗೋಟಿ ಆಲ್ ಇಂಡಿಯಾ ಸರ್ವಿಸ್‌ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆ

ಬೆಂಗಳೂರು: ಐಪಿಎಸ್ ಅಧಿಕಾರಿಗಳಲ್ಲಿಯೇ ಅತಿ ಹೆಚ್ಚಿನ ಚಿನ್ನದಪ ದಕಗಳನ್ನು ಪಡೆದಿರುವ ದಕ್ಷ ಅಧಿಕಾರಿ ಚನ್ನಬಸವಣ್ಣ ಲಂಗೋಟಿ ಆಲ್ ಇಂಡಿಯಾ ಸರ್ವಿಸ್‌ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಗ್ರಹ ಸಚಿವಾಲಯ ಆದೇಶ ಹೊರಡಿಸಿದೆ.

ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನವರಾಗಿದ್ದು, ಈ ಹಿಂದೆ ಗುಪ್ತಚರ ಇಲಾಖೆಯ ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಅಖಿಲ ಭಾರತ ಸೇವೆಗಳ 2014ನೇ ಬ್ಯಾಚಿನ ಸೆಲೆಕ್ಟ್ ಲೀಸ್ ಅಧಿಕಾರಿಯಾಗಿದ್ದಾರೆ.

ಇವರ ಸಾಧನೆ ಎಲ್ಲ ಬೆಳಗಾವಿ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅವರಿಗೆ ಇಂದು ಬೆಳಗಾವಿ ಸೇರಿದಂತೆ ರಾಜ್ಯದ ಜನರು ಮತ್ತು ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಚನ್ನಬಸವಣ್ಣ ಲಂಗೋಟಿ ಅವರು ನಾರ್ವೆ ದೇಶದ ವಿಶೇಷ ಪದಕ ಸೇರಿದಂತೆ ಮುಖ್ಯಮಂತ್ರಿ ಪದಕ, ಕೇಂದ್ರ ಗೃಹ ಮಂತ್ರಿ ಪದಕ, ವಿಶ್ವಸಂಸ್ಥೆ ಶಾಂತಿ ಪಾಲನೆ ಪಡೆ ಯಪದಕ, ಹೀಗೆ ಹಲವಾರು ಪದಗಳನ್ನು ಪಡೆದುಕೊಳ್ಳುವುದರ ಮುಖಾಂತರ ದಕ್ಷ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ

 

ಜಿಲ್ಲೆ

ರಾಜ್ಯ

error: Content is protected !!