Saturday, July 27, 2024

ಶಾಸಕನಾದ ನನಗೆ ರಕ್ಷಣೆ ಇಲ್ಲದಂತಾಗಿದೆ:ಈಶ್ವರ್ ಖಂಡ್ರೆ ಆರೋಪ

ಬೀದರ್ (ಡಿ.10): ಶಾಸಕನಾಗಿರುವ ನನಗೆ ಪ್ರಾಣಾಪಾಯವಿದೆ, ಭದ್ರತೆ ಕೊಡಿ ಎಂದು ಕೇಳಿದ್ದೆ. ಆದರೆ, ನನಗೆ ನೀಡಿದ್ದ ಭದ್ರತೆಯನ್ನು ಪೊಲೀಸರು ಹಿಂಪಡೆದಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಅವರೇ ಕಾರಣ ಎಂದು ಬೀದರ್​ನಲ್ಲಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪ್ರಕಾಶ್ ‌ಖಂಡ್ರೆ ಕಡೆಯವರಿಂದ ನನಗೆ ಬೆದರಿಕೆಯಿದೆ. ಪ್ರಕಾಶ್ ‌ಖಂಡ್ರೆ ಇಂದು ಮುಂಜಾನೆಯಿಂದ ನನ್ನ ಫಾಲೋ ಮಾಡಿದ್ದಾರೆ. ಅವರ ಕಡೆಯವರು ಇಂದು ಬೆಳಗ್ಗೆಯಿಂದ 3 ಬಾರಿ ನನ್ನ ಕಾರಿಗೆ ಅಡ್ಡ ಹಾಕಿದ್ದಾರೆ. ಗೂಂಡಾಗಳು, ಪ್ರಕಾಶ ಖಂಡ್ರೆ ನನ್ನ ಹಿಂದೆ ಓಡಾಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಗೆ ಬಂದು ಧಮ್ಕಿ ಹಾಕಿದ್ದಾರೆ. ಪೊಲೀಸರು ಕೂಡ ಇದನ್ನೆಲ್ಲ ಕಂಡೂ ಕಾಣದಂತೆ ಕುಳಿತಿದ್ದರು. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೀದರ್​ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಬೀದರ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಬೀದರ್ ಜಿಲ್ಲೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ‌ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ‌ಹಣದ ಹೊಳೆಯೇ ಹರಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಮತದಾರರಿಗೆ ಹಣ, ಬೆಳ್ಳಿ ನಾಣ್ಯ, ಸೀರೆಯನ್ನು ಬಹಿರಂಗವಾಗಿ ಕೊಟ್ಟಿದ್ದರು. ಆದರೆ ಬಿಜೆಪಿಯ‌ ಜನ ವಿರೋಧಿ ನೀತಿಯಿಂದಾಗಿ ಮತದಾರ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಅವನತಿ ಇಂದಿನಿಂದ ಆರಂಭವಾಗಿದೆ ಎಂದು ಹೇಳಿದ್ದಾರೆ.

ಇನ್ನು, ಸರ್ಕಾರ ಕೊಟ್ಟಿರುವ ಎಸ್ಕಾರ್ಟ್​ ಬಿಟ್ಟು ಮತಗಟ್ಟೆ ಬಳಿ ಹಾಕಿರುವ ಬೌಂಡರಿಯೊಳಗೆ ಬನ್ನಿ ನೋಡೋಣ ಎಂದು ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಬೀದರ್​ನಲ್ಲಿ ಸವಾಲು ಹಾಕಿದ್ದರು.

 

ಜಿಲ್ಲೆ

ರಾಜ್ಯ

error: Content is protected !!