Sunday, September 22, 2024

ಬಿಜೆಪಿ ಶಾಸಕ ಅರುಣ್​ ನಾರಂಗ್‌ನ ಬಟ್ಟೆ ಹರಿದು ಹಿಗ್ಗಾಮುಗ್ಗಾ ಥಳಿಸಿದ ರೈತರು

ಸುದ್ದಿ ಸದ್ದು ನ್ಯೂಸ್

ಚಂಡೀಗಢ: ರೈತರು ಬಿಜೆಪಿ ಶಾಸಕರೊಬ್ಬರ ಬಟ್ಟೆ ಹರಿದು ಹಾಕಿ ಥಳಿಸಿದ್ದಲ್ಲದೆ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್​ನ ಮುಕ್ತ್​ಸರ್​ ಜಿಲ್ಲೆಯ ಮಲೌತ್​ನಲ್ಲಿ ಶನಿವಾರ ನಡೆದಿದೆ. ಅಬೊಹರ್​ ಕ್ಷೇತ್ರದ ಬಿಜೆಪಿ ಶಾಸಕ ಅರುಣ್​ ನಾರಂಗ್​ ಸೇರಿದಂತೆ ಇತರೆ ಸ್ಥಳೀಯ ಬಿಜೆಪಿ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಮನಬಂದಂತೆ ಥಳಿಸಿದ್ದಾರೆ. ಈ ದುರ್ಘಟನೆಯ ಮಲೌತ್​ನಲ್ಲಿ ಸುದ್ದಿಗೋಷ್ಠಿಯನ್ನು ಮಾಡಲು ಮುಂದಾದಾಗ ನಡೆದಿದೆ.

ಪ್ರತಿಭಟನಾ ನಿರತ ರೈತರು ಮೊದಲೇ ಶಾಸಕ ಅರುಣ್​ ನಾರಂಗ್​ ಆಗಮನಕ್ಕಾಗಿ ಬಿಜೆಪಿ ಕಚೇರಿಯ ಬಳಿ ಕಾಯುತ್ತಿದ್ದರು. ನಾರಂಗ್​ ಬರುತ್ತಿದ್ದಂತೆ ಅವರ ಮತ್ತು ಅವರ ಕಾರಿನ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಶಾಸಕರನ್ನ ಮತ್ತು ಅವರ ಜೊತೆ ಇದ್ದ ಕೆಲ ನಾಯಕರನ್ನ ಹತ್ತಿರದಲ್ಲಿ ಇದ್ದ ಮಳಿಗೆಯೊಂದಕ್ಕೆ ಕರೆತಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಕೆಲ ಸಮಯದ ನಂತರ ಅಂಗಡಿಯಿಂದ ಹೊರಬಂದಾಗ ಅರುಣ್​ ನಾರಂಗ್​ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕೊನೆಯಲ್ಲಿ ಹರಸಾಹಸ ಪಟ್ಟು ನಾರಂಗ್​ ಅವರನ್ನ ಪೊಲೀಸರು ರೈತರ ಗುಂಪಿನಿಂದ ರಕ್ಷಿಸಿ ಬೇರೆ ಸ್ಥಳಕ್ಕೆ ಕರೆದೊಯ್ದರು.

ಶಾಸಕ ಅರುಣ್​ ನಾರಂಗ್​ ಅವರನ್ನ ರೈತರು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ​.

ಜಿಲ್ಲೆ

ರಾಜ್ಯ

error: Content is protected !!