ಸುದ್ದಿ ಸದ್ದು ನ್ಯೂಸ್
ಬಾಗಲಕೋಟೆ (ನವೆಂಬರ್ 28): ನಮ್ಮ ಸಕ್ಕರೆ ನಾಯಕ ಮುರುಗೇಶ್ ನಿರಾಣಿ ಅವರು ಆದಷ್ಟು ಬೇಗ ಸಿಎಂ ಆಗುತ್ತಾರೆ. ಯಾವ ಘಳಿಗೆಯಲ್ಲಿ ಸಿಎಂ ಆಗುತ್ತಾರೆ ನನಗೆ ಗೊತ್ತಿಲ್ಲ. ನಾಳಿಯೇ ಆಗುತ್ತಾರಾ?, ಬಸವರಾಜ ಬೊಮ್ಮಾಯಿ ಅವರನ್ನು ಕೆಳಗೆ ಇಳಿಸುತ್ತಾರಾ? ಎಂದು ಮಾಧ್ಯಮದ ಸ್ನೇಹಿತರು ಬರಬೇಡಿ. ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇಂದಲ್ಲಾ ನಾಳೆ ಅವರು ಸಿಎಂ ಆಗುತ್ತಾರೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವಂಥ ಸಿಎಂ ಆಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬೀಳಗಿಯಲ್ಲಿ ರವಿವಾರ ಹೇಳಿದ್ದಾರೆ.
“ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡ್ತಿಯೇನಪ್ಪಾ” ಎಂದು ಸಚಿವ
ಮುರುಗೇಶ್ ನಿರಾಣಿ ಅವರನ್ನು ವೇದಿಕೆ ಮೇಲೇಯೇ ಕೆ. ಎಸ್. ಈಶ್ವರಪ್ಪ ಅವರು ಕೇಳಿದ್ದಾರೆ
![](https://suddisaddu.com/wp-content/uploads/2021/11/Screenshot_2021-11-29-00-45-06-54_40deb401b9ffe8e1df2f1cc5ba480b12-190x300.jpg)
ಮುಗುಳ್ನಗುತ್ತಾ ಮುರುಗೇಶ್ ನಿರಾಣಿ ಅವರು ಓಕೆ ಎಂದು ಥಂಬ್ಸಪ್ ತೋರಿಸಿದ್ದಾರೆ.