Saturday, July 27, 2024

ಕಿತ್ತೂರು ಉತ್ಸವಕ್ಕೆ ಪೋಲಿಸ್ ಸರ್ಪಗಾವಲು

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವಕ್ಕೆ ಈ ಬಾರಿ ಅಗತ್ಯ ಪೋಲಿಸ್ ಭದ್ರತೆ ಒದಗಿಸಲಾಗಿದ್ದು ಮುಖ್ಯಮಂತ್ರಿ ಹಾಗೂ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ಮತ್ತು ತಂಡದವರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.

ಮಹಿಳಾ ಸಿಬ್ಬಂದಿ ಸೇರಿದಂತೆ 280 ಜನ ಕಾನ್ ಸ್ಟೇಬಲ್ ಗಳು 8 ಜನ ಪೋಲಿಸ್ ವೃತ್ತ ನಿರೀಕ್ಷಕರು 20 ಜನ ಸಬ್ ಇನ್ಸಪೆಕ್ಟರ್ ಹಾಗೂ ಡಿವೈಎಸ್‌ಪಿ ಶಿವಾನಂದ ಕಟಗಿ.ಶಂಕರಗೌಡ ಪಾಟೀಲ, ಮತ್ತು ರಾಮನಗೌಡ ಪಾಟೀಲ ಅವರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸ್ಥಳದಲ್ಲಿ 4 ಅಗ್ನಿಶಾಮಕ ವಾಹನ, 2 ಕೆ ಎಸ್ ಆರ್ ಪಿ ವಾಹನ ಮತ್ತು 2 ಡಿ ಆರ್ ಸಿಬ್ಬಂದಿ ವಾಹನಗಳನ್ನು ನಿಯೋಜಿಸಲಾಗಿದೆ. ಎಂದು ಕಿತ್ತೂರು ವೃತ್ತ ನಿರೀಕ್ಷಕ ಮಂಜುನಾಥ ಕುಸುಗಲ ಮಾಹಿತಿ ನೀಡಿದರು

ಕಿತ್ತೂರು ಉತ್ಸವದಲ್ಲಿ ಭದ್ರತಾ ನಿರತ ಆರಕ್ಷಕರು

ಜಿಲ್ಲೆ

ರಾಜ್ಯ

error: Content is protected !!