Tuesday, September 17, 2024

ಮಂತ್ರಿ ಮಾಡದಿದ್ದರೆ ಸರ್ಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ; ಶಾಸಕ ರಮೇಶ್​ ಜಾರಕಿಹೊಳಿ

ಬೆಳಗಾವಿ: ಒಂದು ತಿಂಗಳಲ್ಲಿ ಮಂತ್ರಿ ಮಾಡಿ, ಇಲ್ಲಾ ಸರ್ಕಾರ ಕಳ್ಕೊಳ್ಳಿ ಎಂದು ಸರ್ಕಾರಕ್ಕೆ ಶಾಸಕ ರಮೇಶ್​ ಜಾರಕಿಹೊಳಿ ಡೆಡ್​ಲೈನ್ ಕೊಟ್ಟಿದ್ದು, ಮಂತ್ರಿ ಮಾಡದಿದ್ರೆ ಬಿಜೆಪಿ ಸರ್ಕಾರವನ್ನೇ ಉರುಳಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ

ಸುಮಾರು ತಿಂಗಳುಗಳಿಂದ ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿರುವ ರಮೇಶ ಜಾರಕಿಹೊಳಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ನನ್ನಿಂದ, ಈಗ ನನಗೆ ಮಂತ್ರಿಸ್ಥಾನ ಇಲ್ಲಾ, ನನ್ನ ತ್ಯಾಗದಿಂದ ಬಿಜೆಪಿ ಅಧಿಕಾರ ಅನುಭವಿಸುತ್ತಿದೆ ನನ್ನನ್ನು ಮಂತ್ರಿ ಮಾಡದೆ ಹೋದ್ರೆ ಈ ಸರ್ಕಾರವನ್ನು ಉಳಿಸುವುದಿಲ್ಲ ಎಂದು ರಮೇಶ್​ ಜಾರಕಿಹೊಳಿ ಆರ್‌ಎಸ್‌ಎಸ್ ಮುಖಂಡರ ಮೂಲಕ ಸರ್ಕಾರಕ್ಕೆ ವಾರ್ನಿಂಗ್​ ನೀಡಿದ್ದಾರೆ.

ಅಥಣಿಯಲ್ಲಿ ರಮೇಶ ಜಾರಕಿಹೊಳಿ ಆರ್‌ಎಸ್‌ಎಸ್ ಉತ್ತರ ಪ್ರಾಂತ್ಯ ಪ್ರಮುಖ ಅರವಿಂದರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿದ್ದಾರೆ. ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾಗುವುದರ ಮೂಲಕ ಬಿಜೆಪಿಗೆ ರಮೇಶ ಜಾರಕಿಹೊಳಿ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ.

 

 

ಜಿಲ್ಲೆ

ರಾಜ್ಯ

error: Content is protected !!