Friday, September 13, 2024

ಹಿಂದೂ ಸಂಘಟನೆಗಳಿಂದ ತ್ರಿಶೂಲ ಪೂಜೆ :ಪರಿಶೀಲಿಸಲು ಪೊಲೀಸ್ ಆಯುಕ್ತರ ಸೂಚನೆ

ಮಂಗಳೂರು (ಅ.16): ಆಯುಧ ಪೂಜೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ತ್ರಿಶೂಲಕ್ಕೆ ಪೂಜೆ ಸಲ್ಲಿಸಿ ಪ್ರದರ್ಶಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್,ಮಂಗಳೂರು ಸೇರಿದಂತೆ  ರಾಜ್ಯದಾದ್ಯಂತ ಆಯುಧ ಪೂಜೆ ಸಂದರ್ಭದಲ್ಲಿ‘ತ್ರಿಶೂಲ ದೀಕ್ಷೆ’ ಮಾಡಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಪ್ರತೀ ವರ್ಷ ಇದನ್ನು ಆಚರಣೆ ರೀತಿಯಲ್ಲಿ ಮಾಡಿರುವುದು ತಿಳಿದುಬಂದಿದೆ.ಇದರಲ್ಲಿ ಕಾನೂನಾತ್ಮಕವಾಗಿ ತಪ್ಪಿದೆಯೇ ಎಂದು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ವಿವಿಧೆಡೆ ಆಯುಧ ಪೂಜೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ತ್ರಿಶೂಲಗಳಿಗೆ ಪೂಜೆ ಸಲ್ಲಿಸಿ ಕೈಯಲ್ಲಿ ಹಿಡಿದಿದ್ದರು.

ಜಿಲ್ಲೆ

ರಾಜ್ಯ

error: Content is protected !!