Thursday, July 4, 2024

ಮಹಾ ಮಾದರಿಯ ಶೇ.16 ವಿಶೇಷ ಮೀಸಲಾತಿಯಂತೆ ರಾಜ್ಯದ ಲಿಂಗಾಯತರಿಗೆ ಕಲ್ಪಿಸುವ ಮನವಿಗೆ: ಆಯೋಗ ವಿಚಾರಣೆಗೆ ನೋಟಿಸ್ ಜಾರಿ

ಕರ್ನಾಟಕ ರಾಜ್ಯದ ಸಮಸ್ತ ಲಿಂಗಾಯತ ಸಮಾಜಕ್ಕೆ ಮಾಹಾರಾಷ್ಟ್ರ ಮಾದರೀಯ ಶೇ.16 ರ ವಿಶೇಷ ಮೀಸಲಾತಿ ಒದಗಿಸಬೇಕೆಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮೂಲಕ ಹೋರಾಟ ಮಾಡುತ್ತಿದ್ದು ಅದರ ಫಲವಾಗಿ ದಿನಾಂಕ 21 ಅಕ್ಟೋಬರ್ 2021 ರಂದು “ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ”ವು ಬೆಂಗಳೂರಿನ ವಸಂತನಗರದ ಡಿ.ದೇವರಾಜ ಅರಸು ಭವನ ಎರಡನೇ ಮಹಡಿಯ ಸಭಾಂಗಣದಲ್ಲಿ ಮಹಾ ಮಾದರಿ ಶೇ.16 ಮೀಸಲಾತಿ ಕಲ್ಪಿಸುವ ಮನವಿಯ ಪರಿಶೀಲನೆಗೆ ವೇದಿಕೆಯ ಮುಖ್ಯ ಸಂಘಟಿಕರಾದ ಬಿ.ಎಂ. ಚಿಕ್ಕನಗೌಡರ ಅವರಿಗೆ ನೊಟೀಸ್ ನೀಡಿದೆ.ಆಸಕ್ತರು ಈ ವಿಷಯದ ಕುರಿತು ಶೇ16 ಮಾಹಾರಾಷ್ಟ್ರ ಮಾದರೀಯ ಮೀಸಲಾತಿ ರಾಜ್ಯದ ಲಿಂಗಾಯತರಿಗೆ ವಿಶೇಷ ಮೀಸಲಾತಿಯಾಗಿ ಕಲ್ಪಿಸಲು ತಮ್ಮಲ್ಲಿರುವ ಮಾಹಿತಿ ಹಾಗೂ ದಾಖಲೆಗಳಿದ್ದರೆ ವೇದಿಕೆಯ ಮುಖ್ಯ ಸಂಘಟಿಕರಾದ ಬಿ.ಎಂ.ಚಿಕ್ಕನಗೌಡರ (ಮೊಬೈಲ್ ಸಂಖ್ಯೆ-7975471279)ಅವರಿಗೆ ಇದೆ ತಿಂಗಳ 20ರ ಒಳಗಾಗಿ ಸಲ್ಲಿಸುವಂತೆ ವಿನಂತಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!