ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ.

ಮುದಗಲ್ಲ :ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್‌ ಯೋಧರಿಗೆ ಮುದಗಲ್ಲ ಪಟ್ಟಣಯಲ್ಲಿ ಪೋಲಿಸ್ ಟೇಶನ್ ಎದುರಿಗೆ ಕ್ಯಾಂಡಲ್ ಹಿಡಿದು ಗೌರವನಮನ ಸಲ್ಲಿಸಲಾಯಿತು.

ಮೂರನೇ ವರ್ಷದ ಗೌರವ ಸಮರ್ಪಣೆ ಹುತಾತ್ಮರ ಪೋಟೋ ಹಿಡಿದು ಹಾಗೂ ಕ್ಯಾಂಡಲ್ ಹಿಡಿದು ನಮನ ಸಲ್ಲಿಸಿದರು.ನಂತರ ಮಾತನಾಡಿದ ಹುಸೇನ್ ಪಾಶ ಮುನ್ನ ಅವರು ‘2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಫೆ.14ರಂದು ನಾವು ಇಲ್ಲಿ ಸೇರಿ ಹುತಾತ್ಮ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುದಗಲ್ಲ ಘಟಕ ಹಾಗೂ ಸ್ನೇಹಿತರ ಬಳಗ ಹಾಗೂ ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ಹುಸೇನ್ ಪಾಷಾ (ಮುನ್ನ) ಪುರಸಭೆ ಸದಸ್ಯ ಶ್ರೀಕಾಂತ್ ಗೌಡ ಪಾಟೀಲ್ ರಾಘವೇಂದ್ರ ಕುದುರೆ ಮರಿಸ್ವಾಮಿ ದೇವರಮನೆ ಉಸ್ಮಾನ್ ಭಾಗವಾನ್ ಚಿರಂಜೀವಿ ರೋಡ್ ಕರ್ ಬಸವರಾಜ್ ಹಿರೇಮನಿ ಜಾನಿ ಇತರರು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";