ಸರಕಾರದಿಂದ ನೆಟ್ಟ ಸಸಿ ಕಿತ್ತು ಎಸೆದ ಕಿಡಿಗೇಡಿಗಳು

ಬೆಳಗಾವಿ :ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಹಾಗೂ ಅರಳಿಹಟ್ಟಿ ಮಾರ್ಗದ ರಸ್ತೆ ಬದಿ ಇದ್ದ ಸಸಿಗಳನ್ನು ಕಿತ್ತು ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಸರ್ಕಾರ ಸಸಿ ನೆಡಲು ಕೋಟಿ ಕೋಟಿ ಖರ್ಚು ಮಾಡಿ ವನಗಳ ರಕ್ಷಣೆ ಮಾಡಲು ಹರಸಾಹಸ ಪಡುತ್ತಿದೆ

ಆದರೆ ನಿಸರ್ಗದ ಅರಿವೇ ಇಲ್ಲದ ಕೆಲ ಕಿಡಿಗೇಡಿಗಳು ಸರಕಾರದ NRG ಯೋಜನೆ ಅಡಿಯಲ್ಲಿ ಪ್ರತಿ ನಗರ ಹಾಗೂ ಹಳ್ಳಿ ಹಳ್ಳಿಯ ರಸ್ತೆ ಹಾಗೂ ಸರ್ಕಾರದ ಆಧಿನದಲ್ಲಿರುವ ಖಾಲಿ ಜಾಗದಲ್ಲಿ ನೆಡಲಾದ ಸಸಿಗಳನ್ನ ಕಿತ್ತು ಎಸೆಯುತ್ತಿದ್ದಾರೆ ಇಂತಹ ಅಂಧರಿಗೆ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನೋ ಅರಿವೇ ಇಲ್ಲವಾ ಅನ್ನೋ ಪ್ರಶ್ನೆ ಎದ್ದು ಕಾಣುತ್ತಿದೆ

ಗಡಿ ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವದರಿಂದ ಇಂತಹ ದುಶಕೃತ್ಯ ಎಸಗುವ ಕಿಡಿಗೇಡಿಗಳನ್ನ ಹೆಡೆಮುರಿ ಕಟ್ಟಿ ನಿಸರ್ಗದೇವತೆಯ ರಕ್ಷಣೆ ಮಾಡಬೇಕಾಗಿದೆ

ವರದಿ: ಅಬ್ಬಾಸ ಮುಲ್ಲಾ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";