ಭೀಕರ ದುರಂತ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರ ಸಾವು

ಕಲಘಟಗಿ: ತಾಲೂಕಿನ ಚಳಮಟ್ಟಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಪೋಲಿಸ್ ವಾಹನವಾದ 112 ಭೀಕರ ಅಪಘಾತಕ್ಕೆ ಈಡಾಗಿ ಒಬ್ಬ ಪೊಲೀಸ್ ಸಿಬ್ಬಂದಿ ಜೊತೆಗೆ ಇಬ್ಬರು ಸಾವಿಗೀಡಾಗಿದ್ದಾರೆ.

ಈ ದುರಂತ ನಡೆಯುವ ಅರ್ಧ ಗಂಟೆ ಮೊದಲೇ ಪಂಡಿತ್ ಕಾಸರ್ ಅವರು ಕಾರ್ಯಕ್ಕೆ ಆಗಮಿಸಿದ್ದು ಎನ್ನಲಾಗಿದೆ.

ಹಾಗೂ ಇನ್ನೊಬ್ಬ ಪೊಲೀಸ್ ಸಿಬ್ಬಂದಿಗೆ ಭೀಕರ ಗಾಯವಾಗಿದ್ದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಪಾಯ ನಡೆದ ಕೂಡಲೇ ಕಲಘಟಗಿ ಪೊಲೀಸ್ ಠಾಣೆ ಸಿಪಿಐ ಆದ ಪ್ರಭು ಸೂರಿನ ನೇತೃತ್ವದಲ್ಲಿ ತಂಡ ಭೀಕರ ಅಪಘಾತದ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ಮತ್ತು ಹುಬ್ಬಳ್ಳಿ ಧಾರವಾಡ್ ಪೊಲೀಸ್ ಅಧಿಕಾರಿಗಳು ಎಲ್ಲ ಕಡೆಗೂ ನಾಕಾಬಂದಿ ಹಾಕಿ ತೀವ್ರ ತನಿಖೆಯನ್ನು ನಡೆಸುತ್ತಿದ್ದಾರೆ.

ಹಾಗೂ ಮರಣ ಹೊಂದಿದ ಪೊಲೀಸ್ ಸಿಬ್ಬಂದಿಗೆ ಧಾರವಾಡ ಜಿಲ್ಲಾದ್ಯಂತ ಪೊಲೀಸ್ ಸಿಬ್ಬಂದಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಗೌರವ ಸಂತಾಪನೆಯನ್ನು ಸಲ್ಲಿಸುತ್ತಿದ್ದಾರೆ.

ವರದಿ: ಶಶಿಕುಮಾರ್ ಕಟ್ಟಿಮನಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";