‘ದೆಹಲಿಯಿಂದ ಬಂದ ಕೆಲವು ನಾಯಕರು ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಬಸನಗೌಡ ಪಾಟೀಲ ಯತ್ನಾಳ

ಬೆಳಗಾವಿ: ‘ದೆಹಲಿಯಿಂದ ಬಂದ ಕೆಲವು ನಾಯಕರು ಬಸನಗೌಡರೆ ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಎಂದು ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ರಾಮದುರ್ಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ. ದೆಹಲಿಗೆ ಹೋಗಿ ಸೋನಿಯಾ ಗಾಂಧಿ , ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿಸ್ತೀವಿ ಅಂತ ಹೇಳುತ್ತಾರೆ. ನನ್ನ ಬಳಿಯೂ ಒಂದಷ್ಟು ಮಂದಿ ಬಂದಿದ್ದರು. ನಿಮ್ಮನ್ನು ಮುಖ್ಯಮಂತ್ರಿ ಮಾಡಸ್ತೇವೆ 2500 ಕೋಟಿ ರೆಡಿ ಮಾಡಿ ಇಟ್ಟುಕೊಳ್ಳಿಇ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
2500 ಕೋಟಿ ಅಂದ್ರೆ ಏನು ಅಂತ ಗೊತ್ತಾ ? ಅದನ್ನು ಕೋಣೆಯಲ್ಲಿ ಇಡೋದಾ ಇಲ್ಲ ಗೋದಾಮಿನಲ್ಲಿ ಇಡೋದಾ ಅಂತ ನಾನು ಅವರನ್ನು ಪ್ರಶ್ನೆ ಮಾಡಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ. ನೋಟ್ ಬುಕ್ ವಿತರಣೆ, ಸಾಮೂಹಿಕ ವಿವಾಹ , ತಾಳಿ ಭಾಗ್ಯ ಎಲ್ಲ ಕೊಡುತ್ತಾರೆ. ಎಲ್ಲ ಭಾಗ್ಯವನ್ನು ತೆಗೆದುಕೊಳ್ಳಿ ವೋಟ್ ಹಾಕುವಾಗ ಯೋಚಿಸಿ ಯೋಜಿಸಿ ಒಳ್ಳೆಯ ಭಾಗ್ಯ ಇರುವ ಅಭ್ಯರ್ಥಿಗೆ ಹಾಕಿ ಎಂದು ಕಿವಿಮಾತು ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";