ಪರಪುರಷನ ಜತೆ ಸರಸ ಸಲ್ಲಾಪ, ಗಂಡನಿಗೆ ತಿಳಿಯುವ ಮುನ್ನವೇ ಸುಪಾರಿ ನೀಡಿ ಕೊಲೆ

ಹಾಸನ, (ಫೆ.10):  ತನ್ನ ಕಾಮದ ತೀಟೆ ತೀರಿಸಿಕೊಳ್ಳಲು ಕಟ್ಟಿಕೊಂಡ ಗಂಡನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್​ ಬಳಿ ಕಳೆದ ವಾರ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಜ.31ರಂದು ಸಂಜೆ ಶಾಲೆಯಿಂದ ಮಗನನ್ನು ಕರೆತರಲು ಬೈಕ್​ನಲ್ಲಿ ತೆರಳಿದ್ದ ಆನಂದ್​ಕುಮಾರ್​ (42) ಎಂಬಾತನನ್ನು ಕಾವಲು ಹೊಸೂರು ಗೇಟ್​ ಬಳಿ ಅಡ್ಡಗಟ್ಟಿದ ಅಪರಿಚಿತರಿಬ್ಬರು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ಎಸ್​ಪಿ. ಆರ್​.ಶ್ರೀನಿವಾಸ್​ಗೌಡ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಮೃತನ ಪತ್ನಿ ಸುನೀತಾಳ ವಿಚಾರಣೆಗೆ ಮುಂದಾಗುತ್ತಿದ್ದಂತೆ ಭಯಾನಕ ರಹಸ್ಯ ಬಯಲಾಗಿದೆ.

ನುಗ್ಗೇಹಳ್ಳಿಯಲ್ಲಿ ಇದೇ ಗ್ರಾಮದ ನವೀನ್​ ಎಂಬಾತ ಯೋಗ ಕ್ಲಾಸ್ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಯೋಗ ಕ್ಲಾಸ್​ಗೆ ಸುನೀತಾ ಸೇರಿದ್ದಳು. ನವೀನ್​ ಮತ್ತು ಸುನೀತಾ ನಡುವಿನ ಆರಂಭದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು. ಅಕ್ರಮ ಸಂಬಂಧವೂ ಬೆಳೆದಿತ್ತು. ಈ ವಿಚಾರ ಗಂಡನಿಗೆ ಗೊತ್ತಾದರೆ ಅಡ್ಡಿಯಾಗುತ್ತಾನೆ ಎಂದು ಆತನ ಕೊಲೆಗೆ ಪತ್ನಿಯೇ ಬೆಂಗಳೂರಿನ ವ್ಯಕ್ತಿಗಳಿಬ್ಬರಿಗೆ ಸುಪಾರಿ ನೀಡಿದ್ದಳು. ಇದಕ್ಕೆ ನವೀನ್​ ಸಹ ಕೈ ಜೋಡಿಸಿದ್ದ. ಆನಂದ್​ ಓಡಾಡುವ ಮಾರ್ಗವನ್ನು ಕೊಲೆಗಡುಕರಿಗೆ ಮಾಹಿತಿ ನೀಡಿದ್ದರು. ಅದರಂತೆ ಜ.31ರಂದು ಆನಂದ್​ನನ್ನು ಕೊಲೆ ಮಾಡಲಾಗಿತ್ತು.

2014ರಲ್ಲಿ ಹಿರೀಸಾವೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇದೇ ಸುನೀತಾಳನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದಳು. ಇದೀಗ ಗಂಡನ ಕೊಲೆ ಕೇಸ್​ನಲ್ಲಿ ಪ್ರಿಯಕರನ ಜತೆ ಸುನೀತಾ ಜೈಲು ಸೇರಿದ್ದಾಳೆ. ಸುಪಾರಿ ಪಡೆದು ಹತ್ಯೆ ಮಾಡಿದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";