ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್‌ ಸಾಲ ಕಟ್ಟಿಲ್ಲ! ಬಿಜೆಪಿಗೆ ಧಮ್ಮು ತಾಕತ್ತು ಇದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ: ಎಂ. ಲಕ್ಷ್ಮಣ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ವಾಪಸ್ ಕಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ 9 ಕೋ-ಆಪರೇಟಿವ್ ಬ್ಯಾಂಕ್‌ಗಳಿಗೆ ಮೋಸ ಮಾಡ್ತಿದ್ದಾರೆ. 9 ಬ್ಯಾಂಕ್ ಗಳಲ್ಲಿ 578 ಕೋಟಿ ಸಾಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅರಿಹಂತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ 42 ಕೋಟಿ ಸಾಲ ಪಡೆದುಕೊಂಡಿದ್ದಾರೆ. ಇದುವರೆಗೆ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ವಾಪಸ್ ಕಟ್ಟಿಲ್ಲ ಎಂದು ಆರೋಪಿಸಿದರು.

ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪನಿ 72 ಕೋಟಿ ವರ್ಷಕ್ಕೆ ಪ್ರಾಫಿಟ್ ಮಾಡ್ತಿದೆ. ಪ್ರಾಫಿಟ್ ಮಾಡ್ತಾ ಇದ್ದರೂ ಕೂಡ ಎನ್ಪಿಎ ಅಂತ ಘೋಷಣೆ ಮಾಡಲಾಗಿದೆ. ಅಮಿತ್ ಶಾ ಕೃಪಾ ಕಟಾಕ್ಷದಿಂದ ರಮೇಶ್ ಜಾರಕಿಹೊಳಿ ಸಾಲ ವಸೂಲಿ ಮಾಡಲಾಗ್ತಿಲ್ಲ. ಸಿಎಂ ಬೊಮ್ಮಾಯಿ ನೇರವಾಗಿ ಈ ಸ್ಕ್ಯಾಮ್ ನಲ್ಲಿ ಭಾಗಿಯಾಗಿದ್ದಾರೆ. ರೈತರಿಗೆ 50 ಕೋಟಿ ಸಾಲ ವಾಪಸ್ ನೀಡುವುದು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

NCLT ಈಗ ಇನ್ಸಾಲ್ವೆನ್ಸಿ ಪ್ರೊಸೆಸ್ ಗೆ ಸ್ಟೇ ನೀಡಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಡಿಫಾಲ್ಟರ್ ಗಳು ಹಣ ಪಡೆಯಲು ಬಿಡಬಾರದು. ವಿಲ್ ಫುಲ್ ಡಿಫಾಲ್ಟರ್ ಅಂತ ಘೋಷಣೆ ಮಾಡಿ ಎಂದು ಆಗ್ರಹಿಸಿದರು.

540 ಕೋಟಿ ರೂಪಾಯಿಗಳ ಈ ಸ್ಕ್ಯಾಮ್, ಮಲ್ಯ ಹಗರಣದ ಸಮನಾಗಿದೆ. ಇಷ್ಟಿದ್ದರೂ ಕೂಡ ಬಿಜೆಪಿಯವರು ಮತ್ತೆ ಈ ಮನುಷ್ಯನ್ನ ಮಂತ್ರಿ ಮಾಡಲು ಹೊರಟಿದ್ದೀರಿ. ಎಸ್ ಟಿ ಸೋಮಶೇಖರ್, ಅಮಿತ್ ಶಾ ನೇರವಾಗಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.

ಸಮ್ಮಿಶ್ರ ಸರ್ಕಾರ ಬೀಳಿಸುವುದಕ್ಕೆ ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಸಹಕಾರ‌ ಕೊಟ್ಟಿದ್ದು ಎಂದು ಆರೋಪ ಮಾಡಿದ ಅವರು, ಜನ ಸಂಕಲ್ಪ ಯಾತ್ರೆಯಲ್ಲಿ ಬಸವರಾಜ ಬೊಮ್ಮಾಯಿಯವರು ಎಲ್ಲ ಕಡೆಯೂ ಹೋಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಯ್ಯೋ ಕಾರ್ಯಕ್ರಮ ಮಾಡುತ್ತಿದ್ದಾರೆ. ನಿಮಗೆ ಧಮ್ಮು ತಾಕತ್ತು ಇದ್ದರೆ ರಮೇಶ್ ಜಾರಕಿಹೊಳಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಸವಾಲು ಹಾಕಿದರು.

 

 

 

 

ಕೃಪೆ:ವಿಕ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";