ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ; ಮೈದುನನಿಂದ ಮರ್ಡರ್ 

ಹುಬ್ಬಳ್ಳಿ (ಸೆ.10): ಅದು ಮಟ ಮಟ ಮಧ್ಯಾಹ್ನದ ಹೊತ್ತು. ಊಟ ಮುಗಿಸಿ ಸ್ವಲ್ಪ ಹೊತ್ತು ನಿದ್ದೆಗೆ ಜಾರಿದರೇ ಆಯ್ತು ಅಂದುಕೊಳ್ಳೋ ಹೊತ್ತಲ್ಲೇ ಆ ಗ್ರಾಮಸ್ಥರಿಗೆ ಇದ್ದಕ್ಕಿದ್ದಂತೆ ಬೆಚ್ಚಿಬೀಳೋ ಸುದ್ದಿಯೊಂದು ಬರಸಿಡಿಲು ಬಡಿದಂತಾಯಿತು. ಊರಿನ ಜನ ಎದ್ನೋ ಬಿದ್ನೋ ಅಂತ ಓಡಿ ಬಂದು ನೋಡುವಷ್ಟರಲ್ಲಿ ಅಲ್ಲಿ, ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿತ್ತು.ಮೊಬೈಲ್ ಗಾಗಿ ಮರ್ಡರ್  ಅಂತಾರೆ, ಅನೈತಿಕ ಸಂಬಂಧದ  ಹಿನ್ನೆಲೆಯಲ್ಲಿ ಹೀಗಾಗಿದೆ ಅಂತಾನು ಕೆಲವರು ಹೇಳ್ತಾರೆ. ಅಸಲಿಗೆ ಮಹಿಳೆಯ ಮರ್ಡರ್ ಹಿಸ್ಟರಿ ಏನು..? 
ಈ ಗ್ರಾಮದಲ್ಲಿ ನಡೆದ ದುರ್ಘಟನೆಯ ಶಾಕ್ ನಿಂದ ಇನ್ನೂ ಗ್ರಾಮಸ್ಥರು ಹೊರಬಂದಿಲ್ಲ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಯಾರೂ ನಿರೀಕ್ಷಿಸದ ದುರ್ಘಟನೆಯೊಂದು ನಡೆದು ಗ್ರಾಮಸ್ಥರು ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಿದೆ. ನಡುಬೀದಿಯಲ್ಲಿ ಮೈದುನನಿಂದಲೇ ಅತ್ತಿಗೆಯ ಬರ್ಬರ ಹತ್ಯೆಯಾಗಿದೆ. ರಕ್ತದ ಮಡುವು ಕಂಡು ಗ್ರಾಮವೇ ಬೆಚ್ಚಿಬಿದ್ದಿದೆ.

ಸುನಂದಾಳನ್ನು ಮಹಾಂತೇಶ್ ಕೊಡಲಿಯಿಂದ ಕತ್ತಿಗೆ ಮೇಲೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವನಲ್ಲಿ ಬಿದ್ದ ಸುನಂದಾ ಆಸ್ಪತ್ರೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಡಿಗಟ್ಟಿ ಗ್ರಾಮದ ಸುನಂದಾಳನ್ನು ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಹನುಮಂತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ವಿವಾಹ ಆಗಿ ಸುಮಾರು 15 ವರ್ಷ ಕಳೆದಿದೆ. ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದ ದಂಪತಿ ಸಂಸಾರ ಅಂತ ಹೇಳಿಕೊಳ್ಳುವಂತೆ ಇರಲಿಲ್ಲವಂತೆ. ಗಂಡ ಹೆಂಡತಿ ನಡುವೆ ಆಗಾಗ ಗಲಾಟೆ ಮಾಮೂಲಿಯಾಗಿತ್ತು.ಗಂಡನ ಮನೆಗಿಂತ ಸುನಂದಾ ಹೆಚ್ಚಾಗಿ ತವರುರಿನಲ್ಲಿ ಇರುತ್ತಿದ್ದಳಂತೆ. ಸುಮಾರು ಏಳೆಂಟು ವರ್ಷಗಳ ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಗಂಡನ ಮನೆಗೆ ಬಂದಿದ್ದಳು.
ಕೇವಲ ನಾಲ್ಕು ದಿನಗಳ ಹಿಂದಷ್ಟೇ ತವರೂರಿನಿಂದ ಯರಿ ನಾರಾಯಣಪುರಕ್ಕೆ ಬಂದಿದ್ದ ಸುನಂದಾ, ಈಗ ಮೈದುನನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾದ್ದಾಳೆ. ಗಂಡ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಮನೆಗೆ ಬಂದಿದ್ದ ಮೈದುನ ಮಹಾಂತೇಶ, ಸುನಂದಾಳಿಗೆ ಮೊಬೈಲ್ ಕೊಡುವಂತೆ ಒತ್ತಾಯಿಸಿದ್ದಾನೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಅತ್ತಿಗೆಯ ಕತ್ತಿಗೆ ಕೊಡಲಿಯಿಂದ ಹೊಡೆದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ದ ಮಹಾಂತೇಶ, ಅತ್ತಿಗೆಯನ್ನು ಮುಗಿಸಿ ಕುಂದಗೋಳ ಪೊಲೀಸರಿಗೆ ಶರಣಾಗಿದ್ದಾನೆ. ಕೇವಲ ಮೊಬೈಲ್ ಗಾಗಿ ಇಷ್ಟೆಲ್ಲಾ ರಾದ್ಧಾಂತವಾಗಿದೆ ಅಂತ ಸುನಂದಾ ಅತ್ತೆ ಉಡಚಮ್ಮ ಹೇಳಿದ್ದಾರೆ.
ಕೊಲೆಗೆ ಕಾರಣವಾಯ್ತಾ ಅನೈತಿಕ ಸಂಬಂಧ!?

ಸುನಂದಾ ಸಹೋದರ ಕುಂದಗೋಳ ಪೊಲೀಸ್ ರಿಗೆ ದೂರು ನೀಡಿದ್ದಾರೆ. ಆರೋಪಿ ಮಹಾಂತೇಶ, ಸುನಂದ ಗಂಡನ ದೊಡ್ಡಪ್ಪನ ಮಗ. ಇಬ್ಬರು ಸಹೋದರರ ಮದ್ಯ ಆಸ್ತಿ ಕಲಹ ಇತ್ತು. ಆಗಾಗ ಅತ್ತಿಗೆ ಸುನಂದಾಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಅಂತ ದೂರು ದಾಖಲಿಸಿದ್ದಾರೆ. ಆದರೆ ಗ್ರಾಮಸ್ಥರು ಹೇಳೋ ಪ್ರಕಾರ, ಸುನಂದಾ ಮತ್ತು ಆರೋಪಿ ಮಹಾಂತೇಶ ಇಬ್ಬರ ಮದ್ಯ ಅನೈತಿಕ ಸಂಬಂಧ ಇತ್ತು. ಇಬ್ಬರು ಸುಮಾರು ವರ್ಷ ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದರು.

ಗಂಡನಿಂದ 8 ವರ್ಷ ದೂರವೇ ಇದ್ದ ಸುನಂದಾ ಮಹಾಂತೇಶ ಜೊತೆ ಜಗಳವಾಡಿ ತವರು ಮನೆ ಸೇರಿದ್ದಳು ಎನ್ನಲಾಗಿದೆ. ತೀರಾ ಇತ್ತೀಚಿಗೆ ಆಕೆ ಮತ್ತೆ ಗಂಡ ಮನೆ ಸೇರಿದ್ದಳು. ಮಕ್ಕಳು ಜೊತೆ ಯರಿನಾರಾಯಣಪುರಕ್ಕೆ ಬಂದಿದ್ದೆ ತಪ್ಪಾಗಿದೆ. ತನ್ನನ್ನು ಬಿಟ್ಟು ಮತ್ತೆ ಗಂಡ ಮನೆ ಸೇರಿದ್ದಕ್ಕೆ ಕೋಪಗೊಂಡು ಮಹಾಂತೇಶ ಈ ಕ್ರೌರ್ಯ ಎಸಗಿದ್ದಾನೆ ಎನ್ನಲಾಗಿದೆ. ಏನೇ ಆಗಲಿ ಒಂದು ಅನೈತಿಕ ಸಂಬಂಧ ಎರಡು ಕುಟುಂಬಗಳನ್ನು ಬೀದಿಗೆ ತಂದಿದೆ. ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿದೆ. ಆದರೆ ಆಕೆಯ ಮೊಬೈಲ್ ನಲ್ಲಿ ಏನಿತ್ತು ಅನ್ನೋ ಸೀಕ್ರೇಟ್ ಮಾತ್ರ ಹಾಗೆಯೇ ಉಳಿದಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";