ಎಂಪಿ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿ: ಸಿದ್ದು ಮತ್ತು ಡಿಕೆಶಿಗೆ ಟಫ್ ವಾರ್!

ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷವು ಜನತಾ ದಳ (ಜಾತ್ಯತೀತ) ಜೊತೆ ಮೈತ್ರಿ ಮಾಡಿಕೊಳ್ಳುತ್ತಿದಂತೆ, ಕಾಂಗ್ರೆಸ್‌ಗೆ ಹೊಸ ಸವಾಲು ಒಡ್ಡುವ ಮತ್ತು ಅದರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವಂತೆ ತೋರುತ್ತದೆ.ಆದಾಗ್ಯೂ, ಕಾಂಗ್ರೆಸ್ ಮೈತ್ರಿಯನ್ನು“ಅಸಂಗತ”ಎಂದು ತಳ್ಳಿಹಾಕಿತ್ತು. ಅಲ್ಲದೆ 20 ಕ್ಕೂ ಹೆಚ್ಚು ಸಂಸತ್ ಸ್ಥಾನಗಳನ್ನು ಗಳಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕಯಲ್ಲಿ ಘೋಷಿಸಿದ್ದ ಐದು ಖಾತರಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿಗೊಳಿಸಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿಗೆ ದೊಡ್ಡ ಉಡುಗೊರೆ ಸಿಕ್ಕಂತಾಗಿದೆ. ಈ ಮೂಲಕ ಅವರು ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜನರ ಬಳಿ ಮತಯಾಚನೆಗೆ ಸಹಾಯವಾದಂತಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಭಾವನೆಯನ್ನು ಲೋಕಸಭೆ ಚುನಾವಣೆಯವರೆಗೂ ಕೆಪಿಸಿಸಿ ಘಟಕ ಕೊಂಡೊಯ್ಯಲಿದೆ, ಹೀಗಾಗಿ ಲಿಂಗಾಯತರು ಮತ್ತು ಒಕ್ಕಲಿಗರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ಎಐಸಿಸಿ ಭರವಸೆಯಾಗಿದೆ.

ಎಂಪಿ ಚುನಾವಣೆ; ಸಿದ್ದು ಮತ್ತು ಡಿಕೆಶಿಗೆ ಟಫ್ ವಾರ್!

ಬಿಜೆಪಿ-ಜೆಡಿಎಸ್ ಮೈತ್ರಿಯು ಕಾಂಗ್ರೆಸ್‌ಗೆ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸಮಸ್ಯೆ ತರಲಿದೆ. ಪ್ರಬಲ ಕಾರ್ಯಕರ್ತರ ನೆಲೆಯನ್ನು ಹೊಂದಿರುವ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಾಲಿಗೆ ಹೆಚ್ಚಿನ ಆತಂಕ ಸೃಷ್ಟಿಸಿದೆ. ಈ ಭಾಗದಲ್ಲಿನ  ಕಳಪೆ ಪ್ರದರ್ಶನ  ರಾಜ್ಯ ಕಾಂಗ್ರೆಸ್ ನಾಯಕತ್ವವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಒಕ್ಕಲಿಗ ಹೃದಯಭಾಗದ 52 ಸ್ಥಾನಗಳಲ್ಲಿ ಕಾಂಗ್ರೆಸ್ 38 ಸ್ಥಾನಗಳನ್ನು ಗೆದ್ದಿರುವುದರಿಂದ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಪುನರಾಗಮನದ ಮೂಲಕ ಪ್ರಾಬಲ್ಯ ಪಡೆದುಕೊಳ್ಳಲು ಬಯಸಿದ್ದಾರೆ.

ಬಿಜೆಪಿ-ಜೆಡಿಎಸ್ ರಾಜಕೀಯ ಸಂಬಂಧವು 2019 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗಿಂತ ಭಿನ್ನವಾಗಿ ಪರಸ್ಪರ ಪ್ರಯೋಜನಕಾರಿ ಎಂದು ನಂಬಲಾಗಿದೆ. 2 ಪಕ್ಷಗಳು ಸಾಂಪ್ರದಾಯಿಕ ವಿರೋಧಿಗಳಾಗಿದ್ದರೂ ಉನ್ನತ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್ ಸ್ಥಳೀಯ ಕೇಡರ್‌ಗೆ ಸರಿ ಹೋಗಲಿಲ್ಲ. ಹಳೇ ಮೈಸೂರಿನಲ್ಲಿ ಎರಡೂ ಪಕ್ಷಗಳು ಪ್ರಮುಖ ಶಕ್ತಿಗಳಾಗಿದ್ದರಿಂದ ಮತಗಳ ವರ್ಗಾವಣೆ ಆಗಲಿಲ್ಲ.

ಆದರೆ, ವಿಧಾನಸಭಾ ಚುನಾವಣೆಯ ಯಶಸ್ಸು 2024 ರ ಲೋಕಸಭೆ ಚುನಾವಣೆಯಲ್ಲಿ ಪುನರಾವರ್ತಿಸಲು ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಂಬಿದೆ. ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಜೆಡಿಎಸ್‌ನ ಹತಾಶೆ, ಮತ್ತು ಐಎನ್‌ಡಿಐಎ ಬಣವು ಬಲಗೊಳ್ಳುತ್ತಿದೆ ಎಂಬ ಬಿಜೆಪಿಯ ಆತಂಕ ಮತ್ತು ಕಾಂಗ್ರೆಸ್‌ಗೆ ವಿರುದ್ಧ ಹೋರಾಡಲು ಅವರನ್ನು ಒಟ್ಟುಗೂಡಿಸಿದೆ.

ಜೆಡಿಎಸ್ -ಬಿಜೆಪಿ ಮೈತ್ರಿಯು ಪ್ರಬಲ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರ ಸಮುದಾಯಗಳಿಂದ ಲಾಭ ಪಡೆಯಬಹುದು 2 ಸಮುದಾಯಗಳೊಂದಿಗೆ ಎರಡು ಪಕ್ಷಗಳು ಒಗ್ಗೂಡುವುದು ಮರುಸಂಘಟನೆ ಮತ್ತು ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂದು ಪಕ್ಷದ ಒಳಗಿನವರು ಭಾವಿಸುತ್ತಾರೆ. ಸಾಂಪ್ರದಾಯಿಕ ಮತದಾರರನ್ನು ಹೊರತುಪಡಿಸಿ ನರೇಂದ್ರ ಮೋದಿ ಬ್ರ್ಯಾಂಡ್ ಕಾಂಗ್ರೆಸ್ಸಿನ ಮತ ಬ್ಯಾಂಕ್ ಮೇಲೆ ಪ್ರಭಾವ ಭೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸನಾತನ ಧರ್ಮದ ಮೇಲಿನ ದಾಳಿಯಿಂದ ಹಿಂದೂ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಆಶಿಸುತ್ತಿದೆ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳನ್ನು ಉಳಿಸಿಕೊಂಡು ತನ್ನ ಭದ್ರಕೋಟೆಯಾದ ಕನಕಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುವುದು ಬಿಜೆಪಿ ಪ್ಲಾನ್ ಆಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";