ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಕಳ್ಳತನ.!ಸಬ್​​ ಇನ್ಸ್​​​ಪೆಕ್ಟರ್​ ಅಮಾನತು

ತಿರುವನಂತಪುರಂ(ಕೇರಳ): ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿ,​ ಬಳಕೆ ಮಾಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಬ್​​ಇನ್ಸ್​ಪೆಕ್ಟರ್​ ಅಮಾನತುಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಚತನ್ನೂರು ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್​, ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಅವರ ವಿಚಾರಣೆ ನಡೆಸಿದ ಬಳಿಕ ಅಮಾನತುಗೊಳಿಸಲಾಗಿದೆ. ಮಂಗಳಾಪುರಂ ಪೊಲೀಸ್​ ಠಾಣೆಯಲ್ಲಿ ಸಬ್​​ಇನ್ಸ್​​ಪೆಕ್ಟರ್​​​ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಮೊಬೈಲ್​​ ಫೋನ್​ ಪಡೆದುಕೊಂಡಿದ್ದರು.
ಅಪಘಾತಕ್ಕೀಡಾಗಿ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಕರು ಮೊಬೈಲ್​ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಸೈಬರ್​ ಕ್ರೈಂ ವಿಭಾಗ ಐಎಂಇಐ ಸಂಖ್ಯೆಯೊಂದಿಗೆ ತನಿಖೆ ನಡೆಸಿತ್ತು. ಈ ವೇಳೆ, ಸಬ್​ ಇನ್ಸ್​​ಪೆಕ್ಟರ್​​ ಜ್ಯೋತಿ ಸುಧಾಕರ್ ಈ ಫೋನ್​​ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ದುಬಾರಿ ಬೆಲೆಯ ಫೋನ್​ ಇದಾಗಿದ್ದ ಕಾರಣ ಸಬ್​ ಇನ್ಸ್​​ಪೆಕ್ಟರ್ ಬಳಕೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";