ಗೆಳೆಯನ ಹೆಂಡತಿಗಾಗಿ ಅವನನ್ನೆ ಕೊಲೆ ಮಾಡಿದ ಕಿರಾತಕ

ಬೆಳಗಾವಿ : ಗೆಳೆಯನ ಹೆಂಡತಿಗಾಗಿ ಟಾವೆಲ್ ನಿಂದ ಗೆಳೆಯನ ಕತ್ತು ಹಿಸುಕಿ,ಆತನನ್ನು ಬಣವಿಯಲ್ಲಿ ಸುಟ್ಟುಹಾಕಿ ಕೊಲೆ ಮಾಡಿದ ಕಿರಾತಕ ಆರೋಪಿಯನ್ನು 48 ಗಂಟೆಗಳಲ್ಲಿ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧದ ಹೊಂದಿದ್ದ ವ್ಯಕ್ತಿಯೋರ್ವ ತನ್ನ ಪ್ರಿಯತಮೆಯ ಪತಿಯನ್ನು ಹತ್ಯೆ ಮಾಡಿ ಹೊಲದಲ್ಲಿನ ಬತ್ತದ ಬಣಿವೆಯಲ್ಲಿ ಸುಟ್ಟು ಹಾಕಿದ್ದ ಪ್ರಕರಣವನ್ನು 48 ಗಂಟೆಗಳಲ್ಲಿಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಂದಗಡ ತಾಲೂಕಿನ ಸಂತೋಷ ನಾರಾಯಣ ಫರೀದ (36) ಮೃತ ವ್ಯಕ್ತಿ. ಕಣಬರ್ಗಿ ಗ್ರಾಮದ ಪರಶುರಾಮ ಅಪ್ಪಣ್ಣ ಕುರುಬರ ಕೊಲೆ ಆರೋಪಿ. ಮೃತ ಸಂತೋಷನ ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದನು. ಅಲ್ಲದೆ ಆರೋಪಿ ತನ್ನ ಮನೆಯಲ್ಲಿ ಅವಳನ್ನು ಇಸಿರಿಕೊಂಡಿದ್ದನು. ಇದನ್ನು ಕೇಳಲು ಮಾ. 2ರಂದು ಕಣಬರ್ಗಿ ಗ್ರಾಮಕ್ಕೆ ಆಗಮಿಸಿದ್ದ ಪತಿ ಸಂತೋಷನನ್ನು ಆರೋಪಿ ಪರಶುರಾಮ ಜಮೀನೊಂದರಲ್ಲಿ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯೆ ಕುಡಿಸಿ ಕೊರಳಿಗೆ ಟಾವೆಲ್ ಬಿಗಿದು, ಕೊಲೆ ಮಾಡಿ ಬತ್ತದ ಹುಲ್ಲಿನ ಬಣಿವೆಯಲ್ಲಿ ಶವ ಸುಟ್ಟು ಹಾಕಿದ್ದನು.

ಈ ಬಗ್ಗೆ ಯಲ್ಲಪ್ಪ ಬುಡುಗ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಮಾಳಮಾರುತಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ ಪಾಟೀಲ, ಪಿಎಸ್‌ಐ ಹೊನ್ನಪ್ಪ ತಳವಾರ, ಶ್ರೀಶೈಲ್.ಹುಳಗೇರಿ ಹಾಗೂ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೆ ಕೊಲೆ ಉಪಯೋಗಿಸಿದ ಬೈಕ್ ವಶಕ್ಕೆ ಪಡೆದಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";