ಐ ಲವ್ ಹೆಸ್ಕಾಂ; ನನ್ನ ಸಾವಿಗೆ ಇವರಿಬ್ಬರೇ ಕಾರಣ,! ಡೆತ್ ನೋಟ್ ಬರೆದು ಉದ್ಯೋಗಿ ನೇಣು.

ಮಂಜುನಾಥ್ ಮುತ್ತಗಿ ಮೃತ ಉದ್ಯೋಗಿ

ಬೆಳಗಾವಿ: ಜಿಲ್ಲೆಯ ಅಥಣಿಯ ಹೆಸ್ಕಾಂ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ ಉದ್ಯೋಗಿ ಬರೆದಿಟ್ಟ ಡೆತ್ ನೋಟ್  ಲಭ್ಯವಾಗಿದೆ. ಡೆತ್​​ ನೋಟ್​​ನಲ್ಲಿ ಸಹೋದ್ಯೋಗಿಗಳ ಕಿರುಕುಳ ಕಾರಣ ಎಂದು ಬರೆಯಲಾಗಿದೆ. ಮಂಜುನಾಥ್ ಮುತ್ತಗಿ ಮೃತ ಉದ್ಯೋಗಿ. ಮಂಜುನಾಥ್ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಸೋಮವಾರ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್​​ನಲ್ಲಿ ನನಗೆ ಈ ಕೆಲಸ ತುಂಬಾ ಇಷ್ಟ. ಐ ಲವ್ ಹೆಸ್ಕಾಂ ಎಂದು ಬರೆಯಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ನನ್ನ ಸಾವಿಗೆ ಇವರು ಇಬ್ಬರೇ ಕಾರಣ. ಬಸು ಕುಂಬಾರ್, ನಜೀರ್ ಡಲಾಯತ್, ಯಾಕೆ ಅಂದ್ರೆ ಇವರು ಮಾಡುವ ಮೋಸ, ಅನ್ಯಾಯ, ಮಾನಸಿಕ ಹಿಂಸೆ ದಬ್ಬಾಳಿಕೆ, ಕಿರುಕುಳ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗದೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.

   ನಜೀರ್ ಡಲಾಯತ್    ಮತ್ತು      ಬಸು ಕುಂಬಾರ್

ನನಗೆ ಈ ಕೆಲಸ ಅಂದ್ರೆ ತುಂಬಾ ತುಂಬಾ ಇಷ್ಟ. ಆದರೆ ಇವರು ಮಾಡುವ ಭೇದಭಾವ. ನಮಗೊಂದು ಅವರಿಗೊಂದು ಅಂತ ಭೇದಭಾವ ನೋಡೋಕೆ ಆಗ್ತಿಲ್ಲ. ನಮ್ಮನ್ನೆಲ್ಲ ವಾರದ ಏಳು ದಿನ 24 ಗಂಟೆಯೂ ಕೇವಲವಾಗಿ ನೋಡುತ್ತಾರೆ. ಆದರೆ ನಾವು ಮಾಡೋದು ಸಹ ಹೆಸ್ಕಾಂ ಕೆಲಸ. ಆದ್ರೆ ಇವರು ನಮ್ಮನ್ನು ನೋಡುವ ರೀತಿ ಸರಿ ಇಲ್ಲ. ಇದು ಬದಲಾಗಬೇಕು.

ನಾವು ಎಲ್ಲರೂ ಒಂದೇ ಅನ್ನೋ ರೀತಿ ಇರಬೇಕು. ಆವಾಗ ಮಾತ್ರ ನನ್ನ ಸಾವಿಗೆ ನ್ಯಾಯ ಸಿಗುತ್ತದೆ. ನನ್ನಿಂದ ಯಾರಿಗಾದ್ರೂ ನೋವಾಗಿದ್ರೆ ಸಾರಿ. I Love HESCM And Athani  ಎಂದು ಡೆತ್​ ನೋಟ್​​​ನಲ್ಲಿ ಬರೆಯಲಾಗಿದೆ.

 

 

 

 

 

 

 

 

(18ನ್ಯೂಸ್)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";