ಮಾನವೀಯತೆ ಮೆರೆದ ಹನುಮಂತ ನಿರಾಣಿ

ಬಾಗಲಕೋಟೆ:(ಮಾ.12)ಬೀಳಗಿ ತಾಲೂಕಿನ ಸಿದ್ದಾಪುರ ಸಮೀಪ ವಿಕಲಚೇತನ ಯಂತ್ರ ಚಾಲಿತ ಬೈಕ್ ನಲ್ಲಿ ರಾಜು ಲಮಾಣಿ ಎನ್ನುವ ವಿಕಲಚೇತನ ಬೀಳಗಿಯಿಂದ ತೆಗ್ಗಿ ಕಡೆಗೆ ಹೊರಟಾಗ ರಸ್ತೆಯ ಮದ್ಯದಲ್ಲಿ ಏಕಾ ಏಕಿಯಾಗಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಬಿದ್ದು ನರಳಾಡುತ್ತಿದ್ದ.

ಇನ್ನ ಅದೇ ರಸ್ತೆಯ ಮಾರ್ಗವಾಗಿ ಸಂಚರಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ರಸ್ತೆಯ ಪಕ್ಕದಲ್ಲಿ ಬಿದ್ದು ನರಳಾಡುತ್ತಿದ್ದ ಯುವಕನನ್ನು ಕಂಡ ತಕ್ಷಣ ವಾಹನ ನಿಲ್ಲಿಸಿ ಗಾಯಾಳು ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಿ ಕ್ಷಣಾರ್ಧದಲ್ಲಿ ಅಂಬುಲೆನ್ನ ತರೆಸಿ.ನಂತರ ವೈದ್ಯರಿಗೆ ಕರೆ ಮಾಡಿ ಗಾಯಾಳು ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ತಿಳಿಸಿದರು.

ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಬಾಗಲಕೋಟೆ ಸಾಗಿಸಿ ಅಂತ ದೂರವಾಣಿ ಮೂಲಕ ವೈದ್ಯರಿಗೆ ಸೂಚಿಸಿದರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";