ಆಸ್ತಿಗಾಗಿ ಮೃತ ವೃದ್ದೆಯ ಹೆಬ್ಬೆಟ್ ಒತ್ತಿಸಿಕೊಂಡಿದ್ದವನ ಮೇಲೆ ಎಫ್​ಐಆರ್

ಮೈಸೂರು:ಆಸ್ತಿಗಾಗಿ ಖಾಲಿ ಪತ್ರಕ್ಕೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಪ್ರಕರಣ ಸಂಬಂಧಪಟ್ಟಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮೈಸೂರಿನ ಶ್ರೀರಾಂಪುರದ ಜಯಮ್ಮ ನವೆಂಬರ್ 16ರಂದು ಮೃತಪಟ್ಟಿದ್ದರು. ಈ ವೇಳೆ ಮೃತ ಜಯಮ್ಮರ ಸಹೋದರಿ ಮಗ ಸುರೇಶ್​ ಎಂಬಾತ ಬಾಂಡ್​ ಪೇಪರ್​ಗೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದ. ಇದನ್ನು ಮೃತ ಜಯಮ್ಮ ಸಹೋದರನ ಸೊಸೆ ಕಾವ್ಯ ಎಂಬುವವರು ಪ್ರಶ್ನಿಸಿದ್ದರು. ಜೊತೆಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಳ್ಳುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರು.

ಇದೀಗ ಸುರೇಶ್​ ಎಂಬಾತನ ವಿರುದ್ಧ ಐಪಿಸಿ ಸೆಕ್ಷನ್ 420, 467, 511 ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";