ಇನ್ನ್ ಮುಂದಾದರೂ ಹುಷಾರಾಗಿರಿ ಕೆಲಸ ಮಾಡುವರಿಗೆ ಓಟ್ ಹಾಕಿ: ಮಾಜಿ ಶಾಸಕ ಅಶೋಕ್ ಪಟ್ಟಣ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಶಿವಾನಂದ ಮಠದಲ್ಲಿ ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಅಶೋಕ್ ಪಟ್ಟಣ ಅವರು. ನಾವು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ನಾವು ಪ್ರಚಾರ ಮಾಡಿಕೊಂಡು ಬರಲಿಲ್ಲ ,ಅದೇ ಬಿಜೆಪಿಯವರು ನಾವು ಇದನ್ನು ಮಾಡಿದ್ದೀವಿ ಅದನ್ನು ಮಾಡಿದ್ದೀವಿ ಅಂತ ಹೇಳಿ ಸುಳ್ಳು ಸುಳ್ಳು ಅಪಪ್ರಚಾರ ಮಾಡಿ ಜನಗಳಿಗೆ ತಲೆ ತುಂಬಿ ಅವರು ಕೈಯಿಂದ ಓಟ್ ಹಾಕಿಸಿಕೊಂಡು ಗೆದ್ದು ಬಂದರು.

ಹೌದಪ್ಪಾ ಏನು ಮಾಡಿದರು ಮೋದಿಜಿ ಅವರು ನಿಮಗೆ. ಎಲ್ಲಾ ಏನು ಹೇಳಿದ್ರು ನಿಮಗೆಲ್ಲಾ ಕಾಂಗ್ರೆಸ್ ನವರು ಹೊರದೇಶಗಳಲ್ಲಿ  ಸ್ವಿಸ್ ಬ್ಯಾಂಕಿನಲ್ಲಿ ಸಾಕಷ್ಟು ದುಡ್ಡುಗಳನ್ನು ಇಟ್ಟಿದ್ದಾರೆ ಅದನ್ನು ಹೊರತರುತ್ತೇನೆ ಪ್ರತಿಯೊಬ್ಬ ಪ್ರಜೆಗಳಿಗೆ 15 ಲಕ್ಷ ರೂಪಾಯಿ ನಿಮ್ಮ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕುತ್ತೀನಿ ಎಂದರು. ಇವಾಗ ಎಲ್ಲಿ ಹಾಕಿದ್ದಾರೆ ಕೇಳಿ ಎಂದರು ಮತ್ತೆ ಇವಾಗ ಕೇಸರಿ ಶಾಲು ಹಿಜಾಬ್ ಬಗ್ಗೆ ಹೇಳಿ ಜನಗಳಿಗೆ ತೆಲೆ ತುಂಬುತ್ತಾ ಇದ್ದಾರೆ ಅದಕ್ಕೆ ಇನ್ನು ಮುಂದಾದರೂ ಹುಷಾರಾಗಿರಿ ಕೆಲಸ ಮಾಡುವರಿಗೆ ಓಟ್ ಹಾಕಿ ಎಂದರು. 

ಈ ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಬಿ ರಂಗನಗೌಡ್ರ, ಜಿಲ್ಲಾ ಪಂಚಾಯತಿ ಸದಸ್ಯ ಜವೂರ್ ಹಾಜಿ ಹಾಗೂ ಅಧ್ಯಕ್ಷ ಪರಪ್ಪ ಜಗವಾಡ, ಮಲ್ಲಪ್ಪ ಸೋಮಗಂಡ ಮಾಜಿ ಸದಸ್ಯೆ ಲಕ್ಷ್ಮವ್ವ ವಾರಿಮಣಿ, ಸದಸ್ಯ ಬಸವರಾಜ್ ಬಿಸನಾಳ ಹಾಗೂ ವೆಂಕಟೇಶ್ ಬಸನಗೌಡ ಮಂಜುನಾಥ್, ಸುಭಾಷ್,ವೆಂಕಣ್ಣ ಮುಧೋಳ ಮತ್ತು ಪಕ್ಷದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ:ಮಂಜುನಾಥ ಕಲಾದಗಿ 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";