ಕೇಂದ್ರ ಬಜೆಟ್ ಸ್ವಾಗತಿಸಿದ ಚೇಂಬರ್ ಆಫ್ ಕಾಮರ್ಸ್: ಬ್ಯಾಲೆನ್ಸ್ ಬಜೆಟ್ ಎಂದ ಜವಳಿ…!

ಹುಬ್ಬಳ್ಳಿ (ಫೆ.01): ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ ಮಂಡಿಸಿದ ವಾರ್ಷಿಕ ಆಯವ್ಯಯ-2022ನ್ನು ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ಸ್ವಾಗತಿಸಿದೆ.

ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅಧ್ಯಕ್ಷರಾದ ವಿನಯ್ ಜವಳಿ, ಇಂದು ಅರ್ಥ ಸಚಿವರು ಮಂಡಿಸಿದ ಬಜೆಟ್ ಸಮತೋಲನದ ಬಜೆಟ್ ಆಗಿದೆ. ಮುಂದಿನ 25 ವರ್ಷದ ದೂರದೃಷ್ಟಿ ಇಟ್ಟುಕೊಂಡು ಮಂಡಿಸಿಲಾಗಿದೆ. ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಹೆಚ್ಚಳ ಮಾಡಿರುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ‌. ಐದು ನದಿಗಳ ಜೋಡಣೆ-ಡಿಪಿಆರ್ ಸಿದ್ಧಪಡಿಸಲು ಆದ್ಯತೆ ನೀಡಿರುವುದು ಖುಷಿಯ ವಿಚಾರ ಎಂದರು.

ಇನ್ನೂ ಕೊರೋನಾ ಸಂದರ್ಭದಲ್ಲಿ ಆದ ಅರ್ಥಿಕ ಹಿನ್ನಡೆಯನ್ನು ಸರಿದೂಗಿಸುವ ಕೆಲಸ ಮಾಡಿದೆ.ಸಣ್ಣಕೈಗಾರಿಗೆ, ಕೃಷಿ ಕೈಗಾರಿಕೆಗಳಿಗೆ ಉತ್ತೇಜಕ್ಕೆ ಒತ್ತು ನೀಡಲಾಗಿದೆ. ಗಂಗಾ ನದಿ ಪಕ್ಕದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಅವಕಾಶ ನೀಡಿದ್ದು ಖುಷಿಯ ವಿಚಾರ.

3ಕೋಟಿ 80 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ. ಬಡವರಿಗೆ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಭೂ ದಾಖಲೆಗಳನ್ನು ಸರಳಿಕರಣ ಮಾಡಲು ‘ಒಂದು ದೇಶ ಒಂದು ನೋಂದಣಿ’ ಮಾಡಿದ್ದು ಸ್ವಾಗತ ಎಂದು ಅವರು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಯೋಜನೆಯಡಿ ಶೇಕಡ 60% ರಷ್ಟು ಸ್ಥಳೀಯ ಖರೀದಿಗೆ ಒತ್ತು ನೀಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದರೆ ಆದಾಯ ತೆರಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು ಆದರೆ ಅದು ಆಗಿಲ್ಲ ಎಂದರು

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";