ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಬೈಲಹೊಂಗಲ: 2022-23 ನೇ ಸಾಲಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಮೌನೇಶ ಗರಗದ (200ಮೀ ಓಟ ದ್ವಿತೀಯ), ಅಭಿಷೇಕ ಗರಗದ (400ಮೀ ಓಟ, 1500 ಮೀ ಓಟ ಪ್ರಥಮ), ಅಭಿಲಾಷ ಹೊಂಗಲ (800ಮೀ ಓಟ, ತ್ರಿವಿಧ ಜಿಗಿತ ಪ್ರಥಮ), ಸಿದ್ದು ಕುರಿ (3000 ಮೀ ಓಟ ಪ್ರಥಮ), ವಿಶಾಲ ತಿರಕನ್ನವರ (3000 ಮೀ ಓಟ ದ್ವಿತೀಯ), ಗೂಳಪ್ಪ ಕುರಿ (ನಡಿಗೆ ಪ್ರಥಮ), ಆಕಾಶ ಸೂರ್ಯವಂಶಿ (ಹರ್ಡಲ್ಸ್ ದ್ವಿತೀಯ), ಬಸವರಾಜ ಹೊಸೂರ (ಉದ್ದ ಜಿಗಿತ ದ್ವಿತೀಯ), ಈರಣ್ಣ ಅಳಗೋಡಿ (ತ್ರಿವಿಧ ಜಿಗಿತ ದ್ವಿತೀಯ) ಹಾಗೂ ಬಾಲಕಿಯರ ವಿಭಾಗದಲ್ಲಿ ಸಾಕ್ಷಿ ನಾಗಣ್ಣವರ (400 ಮೀ ಓಟ, ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ), ಮಂಜುಳಾ ನಿಂಬಾಳ್ಕರ (1500ಮೀ ಓಟ ದ್ವಿತೀಯ) ನಿರ್ಮಲಾ ಸೊಗಲದ (3000ಮೀ ಓಟ ದ್ವಿತೀಯ), ಐಶ್ವರ್ಯ ಕುಲಕರ್ಣಿ (ನಡಿಗೆ ದ್ವಿತೀಯ), ಅಮೂಲ್ಯ ಸೂರ್ಯವಂಶಿ (ತ್ರಿವಿಧ ಜಿಗಿತ ಪ್ರಥಮ), ಅಕ್ಷತಾ ಚಚಡಿ (ತ್ರಿವಿಧ ಜಿಗಿತ ದ್ವಿತೀಯ) ಪ್ರಭಾವತಿ ಆಡಿನ (ಹರ್ಡಲ್ಸ್ ಪ್ರಥಮ) ಸ್ಥಾನಗಳನ್ನು ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೇ 10 ನೆಯ ತರಗತಿಯ ವಿದ್ಯಾರ್ಥಿನಿಯಾದ ಸಾಕ್ಷಿ ಚಂದ್ರು ನಾಗಣ್ಣವರ ಸಮಗ್ರ ವೀರಾಗ್ರಣ ಪ್ರಶಸ್ತಿ ಪಡೆದಿದ್ದಾಳೆ. ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಎಸ್.ಗುರುನಗೌಡರ, ಎಲ್ಲ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";