ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪುನಃ ಗೆದ್ದ ಇತಿಹಾಸವೇ ಇಲ್ಲ: ಅರುಣ್ ಸಿಂಗ್

ಹಾವೇರಿ: ಯಾವ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆಯೋ, ಆ ರಾಜ್ಯದಲ್ಲಿ ಆ ಪಕ್ಷ ಪುನಃ ಅಧಿಕಾರಕ್ಕೆ ಹಿಂದಿರುಗಿದ ಉದಾಹರಣೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೊಂದಿರುವ ಅರುಣ್ ಸಿಂಗ್ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕು ಮಾಸೂರ ಗ್ರಾಮದಲ್ಲಿ ಸುದ್ದಿಗಾರರ ಜತೆ ಶನಿವಾರ ಮಧ್ಯಾಹ್ನ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸೋಲು ಮತ್ತು ಬಿಜೆಪಿ.ಗೆ ಗೆಲುವಿನ ಅಧ್ಯಾಯ ಪ್ರಾರಂಭವಾಗಿದೆ ಎನ್ನುವುದಕ್ಕೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದೇ ಸಾಕ್ಷಿ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ನೇತೃತ್ವದ ಭಾರತ ಜೋಡೋ ಅಭಿಯಾನ ನಿರುಪಯುಕ್ತ. ಬಳ್ಳಾರಿ ಸೇರಿದಂತೆ ಇಂದು ಅವರ ಪಾದಯಾತ್ರೆ 13 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ದಿನಂಪ್ರತಿ ಪತ್ರಿಕೆ ಓದದ ರಾಹುಲ್‌ ಗೆ ರಾಜ್ಯದ ನಿತ್ಯದ ವಿದ್ಯಮಾನ ತಿಳಿಯದೇ ಭಾಷಣ ಮಾಡಿದರೆ ಉಪಯೋಗ ಏನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ರಾಹುಲ್ ಪ್ರವಾಸ ಮಾಡುತ್ತಿದ್ದರೆ ಪ್ರಧಾನಿ ಮೋದಿ ಮತ್ತೊಂದೆಡೆ ಪ್ರವಾಸ ಮಾಡುತ್ತಿದ್ದಾರೆ. ಪ್ರಸಕ್ತ ವಿದ್ಯಮಾನದಲ್ಲಿ ದೇಶದಲ್ಲಿ ಪ್ರಧಾನಿ ಹವಾ ಕರ್ನಾಟಕದಲ್ಲಿ ಸಿ.ಎಂ. ಬೊಮ್ಮಾಯಿ ಕೆಲಸ ಪುನಃ ಐತಿಹಾಸಿಕ ಗೆಲುವನ್ನು ತಂದುಕೊಡಲಿದ್ದು 150 ಸೀಟ್ ಗೆಲುವು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ಎಸ್ ಎಸ್ ಪಾಟೀಲ, ಡಿ.ಸಿ. ಪಾಟೀಲ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದ ರಾಜ ಕಲಕೋಟಿ ಮುಂತಾದವರು ಉಪಸ್ಥಿತರಿದ್ದರು.

 

 

 

 

 

ಕೃಪೆ:ವಿಕ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";