ಬಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ಸಾವು

ಸುದ್ದಿ ಸದ್ದು ನ್ಯೂಸ್ 

ಹಾಸನ: KSRTC ಬಸ್‌ ಮುಖಾಂತರ ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಶಿಕ್ಷಕಿ ವಿಮಲಾ (52) ಮೃತಪಟ್ಟ ಘಟನೆ ನಡೆದಿದೆ . ತಾಲ್ಲೂಕಿನ ಕಬ್ಬಳಿಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಮಂಗಳವಾರ ಮುಂಜಾನೆ ಶಾಲೆಗೆ ಹೋಗಲು ಸ್ಥಳಿಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಸೀಟಿನಲ್ಲಿ ಕುಳಿತ್ತಿದ್ದ ಕೆಲವೇ ನಿಮಿಷದಲ್ಲಿ ಅವರಿಗೆ ಹೃದಯಾಘಾತವಾಗಿದೆ. ನಿರ್ವಾಹಕರು ಟಿಕೆಟ್ ನೀಡಲು ಬಂದು ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಬಸ್‌ನಲ್ಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ದುರದೃಷ್ಟವಶಾತ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ನಂತರ ಶಿಕ್ಷಕರ ಭವನದಲ್ಲಿ ಮೃತ ದೇಹವನ್ನು ಇರಿಸಿ ಅಂತಿಮ ನಮನ ಸಲ್ಲಿಸಿ. ನಂತರ ಸಂಬಂಧಿಗಳ ಮೂಲಕ ಅವರ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಕಳಿಸಿಕೊಡಲಾಯಿತು. ಪತಿ SBI ನಿವೃತ್ತ ನೌಕರ ಸುಂದರ್ ನಾಯಕ್ ಪುತ್ತೂರಿನಲ್ಲಿ ವಾಸವಾಗಿದ್ದು ., ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";