ಚಿಕ್ಕನಂದಿಹಳ್ಳಿಯಲ್ಲಿ ಬಾಯರ್ ಕಂಪನಿಯ ಹೊಸ ಗೋವಿನಜೋಳದ ತಳಿಯ ಅದ್ಧೂರಿ ಕ್ಷೇತ್ರೋತ್ಸವ

ಬೆಳಗಾವಿ: ಜಿಲ್ಲೆಯ ಕಿತ್ತೂರ ತಾಲೂಕಿನ ಚಿಕ್ಕನಂದಿಹಳ್ಳಿ ಯಲ್ಲಿ ಇಂದು ನಾಗಪ್ಪ ವಕ್ಕುಂದ ಅವರ ತೋಟದಲ್ಲಿ ಬಾಯರ್ ಕಂಪನಿಯ ಹೊಸ “ಡಿಕಾಲ್ಬ್9178″ಗೋವಿನಜೋಳದ ತಳಿಯ ಕ್ಷೇತ್ರೋತ್ಸವ ಅದ್ಧೂರಿಯಾಗಿ ನೆರವೇರಿತು.ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ವೇಳೆ  ಮಾತನಾಡಿದ ಬಾಯರ್ ಕಂಪನಿಯ ಬೆಳಗಾವಿ ಜಿಲ್ಲೆ ವಿಭಾಗಿಯ ಅಧಿಕಾರಿಯಾದಂತ ಅಕ್ಷಯ ಮಂಕಾಪುರೇ ಅವರು ಡಿಕಾಲ್ಬ್9178 ಗೋವಿನಜೋಳದ ತಳಿಯ ಗುಣಲಕ್ಷಣಗಳು ಮತ್ತು ಬಾಯರ್ ಕಂಪನಿಯ “ಲಾಡಿಸ್” ಕಳೇನಾಶಕ ಬಳಸುವುದರಿಂದಾಗುವ ಲಾಭಗಳ ಬಗ್ಗೆ ಸವಿವರವಾಗಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಅಧಿಕೃತ ಮಾರಾಟಗಾರರಾದಂತ ದುರಡುಂಡೇಶ್ವರ ಸೀಡ್ಸ್, ನಂದಿ ಆಗ್ರೋ ಸೆಂಟರ್ ಮತ್ತು  ಬಸವ ಕೃಷಿ ಕೇಂದ್ರದ ಮಾಲಿಕರು ಹಾಗೂ  ಕಂಪನಿಯ ಸಿಬ್ಬಂದಿಗಳಾದಂತಹ ಮಂಜು ತಟ್ಟಿಮನಿ, ಸಿದ್ದು ನವಲಗುಂದ ಸೇರಿದಂತೆ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು. 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";