ಕೌಶಲ್ಯ ಕೇಂದ್ರ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದ ಬಸವರಾಜ ಪಾಟೀಲ

ಉಮೇಶ ಗೌರಿ (ಯರಡಾಲ)

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೌಶಲ್ಯ ಕೇಂದ್ರ ಪ್ರಶಿಕ್ಷಣಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ ಸಂಘದ ಸಂಚಾಲಕ ಬಸವರಾಜ ಪಾಟೀಲ ಅವರು ಜಿಲ್ಲೆಯ ಹುಮನಾಬಾದ ಶ್ರೀ ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿದರಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಸೇಡಂ ನಮ್ಮಂತೆ ನಮ್ಮ ಮಕ್ಕಳು ಅನ್ಯರ ಎದುರು ತಿಂಗಳ ಸಂಬಳಕ್ಕಾಗಿ ಕೈ ಚಾಚುವವರಾಗದೇ ನೂರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಸಂಬಳ ನೀಡುವ ಮಾಲೀಕರಾಗಬೇಕು ಎಂದು ಸಲಹೆ ನೀಡಿದರು.

ಬಸವರಾಜ ಪಾಟೀಲ ಸೇಡಂ, ಶಿವಶಂಕರ ತರನಳ್ಳಿ, ರೇವಣಸಿದ್ದ ಜಾಡರ್, ನಾರಾಯಣರಾವ ಚಿದ್ರಿ, ರಾಘವೇಂದ್ರ ಕುಲಕರ್ಣಿ, ಗೋವಿಂದಸಿಂಗ್ ತಿವಾರಿ, ರಾಜಪ್ಪ ಹರಕಂಚಿ, ಚಂದ್ರಕಾಂತ ಮಠಪತಿ, ಗೋಪಾಲಕೃಷ್ಣ ಮೊಹಳೆ, ಇಂದುಮತಿ ಮಠ್ ಭಾಗವಹಿಸಿದ್ದರು.

Share This Article
";