Tuesday, September 17, 2024

ಬೈಕ್-ಟ್ಯಾಕ್ಟರ್ ಅಪಘಾತ! ಪ್ರಾಣಾಪಾಯದಿಂದ ಪಾರಾದ ಅಕ್ಕ-ತಮ್ಮ

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಎಪಿಎಂಸಿ ಗೇಟ್ ಎದುರುಗಡೆ ನಡೆದ ಘಟನೆ.ಲಿಂಗದಾಳ ಗ್ರಾಮದಿಂದ ರಾಮದುರ್ಗ ಪಟ್ಟಣಕ್ಕೆ ಸಂತೆ ಹಾಗೂ ಬ್ಯಾಂಕಿನ ಕೆಲಸವನ್ನು ಮುಗಿಸಿಕೊಂಡು ಇಂದು ಸಂಜೆ 6. ಗಂಟೆ ಸುಮಾರಿಗೆ ಬೈಕ್ ನ ಮೇಲೆ ತನ್ನ ಅಕ್ಕನನ್ನು ಕೂಡಿಸಿಕೊಂಡು ರಾಮದುರ್ಗದಿಂದ ಲಿಂಗದಾಳಕ್ಕೆ ಹೋಗುವಾಗ ರಾಮದುರ್ಗದ ಪಟ್ಟಣದ ಎಪಿಎಂಸಿ ಗೇಟ್ ಎದುರುಗಡೆ ಕಬ್ಬಿನ ಲೋಡನ್ನು ಹೊತ್ತುಕೊಂಡು ಹೋಗುತ್ತಿರುವ ಟ್ಯಾಕ್ಟರ್ ಗೆ ಬೈಕ್ ಸವಾರ ಹಾರ್ನ್ ಹಾಕಿದರು, ಟ್ಯಾಕ್ಟರ್ ಡ್ರೈವರ್ ಮೊಬೈಲ್ ನಲ್ಲಿ ಮಾತನಾಡುತ್ತಿದರಿಂದ ಬೈಕ್ ಸವಾರನಿಗೆ ಸೈಡ್ ಕೊಡದೆ ಹೋಗುತ್ತಿರುವಾಗ ಟ್ರ್ಯಾಕ್ಟರ್ ಟ್ರೈಲರನ್ನು ಅವರ ಸೈಡಿಗೆ ತಂದನು. ಟ್ರ್ಯಾಕ್ಟರ್  ಗಾಲಿಗೆ ಸಿಲುಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಸುಮ್ಮವ ಕಳಿಮಣಿ ಹಾಗೂ ಮಾರುತಿ ಮಾದರ ರಾಮದುರ್ಗ ತಾಲೂಕಿನಿ ಲಿಂಗದಾಳ ಗ್ರಾಮದವರು.

ಹೌದು ಇಲ್ಲಿ ಕಬ್ಬಿನ ಸೀಸನ್ ನಲ್ಲಿ ಟ್ರ್ಯಾಕ್ಟರ್ ಗಳು ಕಬ್ಬಿನ ಲೋಡ್ ಹೊತ್ತಿಕೊಂಡು ಹೋಗುತ್ತಿರುವಾಗ ಟೇಪ್ ರೆಕಾರ್ಡರ್ ಹಾಗೂ ಮೊಬೈಲ್ ಬಳಕೆಯನ್ನು ಮಾಡುತ್ತಾ ರಸ್ತೆಯ ಮಧ್ಯದಲ್ಲಿ ಹೋಗುತ್ತಿರುತ್ತಾರೆ. ಇದನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಗಮನಹರಿಸುತ್ತಾರೆ ಅಥವಾ ಇಲ್ಲ ಎಂದು ಕಾದುನೋಡಬೇಕಾಗಿದೆ.

ಜಿಲ್ಲೆ

ರಾಜ್ಯ

error: Content is protected !!