ಈಶ್ವರಪ್ಪ ವಜಾಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸನಿಂದ ಪ್ರತಿಭಟನೆ

ಬೀದರ್: ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ವಜಾಗೆ ಆಗ್ರಹಿಸಿ, ಜಿಲ್ಲೆಯ ಹುಮನಾಬಾದನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಹೆಸರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ಮನವಿಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಜಿ.ಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ಈಶ್ವರಪ್ಪ ಅವರಿಗೆ ಮಾನಮರ್ಯಾದೆ ಇದ್ದರೆ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.

ಟೆಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ, ಪ್ರಕಾಶ ಕಾಡಗೊಂಡ ಸೋನಕೇರಿ, ಪ್ರಭು ತಾಳಮಡ್ಗಿ, ಅಫಸರಮಿಯ್ಯ ಮಾತನಾಡಿದರು.
ಪುರಸಭೆಯ ಅಧ್ಯಕ್ಷರಾದ ಕಸ್ತುರಿ ಪರ್ಸನೋರ, ಮಹಾಂತಯ್ಯ ತೀರ್ಥ, ಮಾಜಿ ಅಧ್ಯಕ್ಷ ಪ್ರಕಾಶ ಬತಲಿ, ಯುತ್ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಂಬಗಿ, ಯಾಸಿರಮಿಯ್ಯ, ಸುರೇಶ ಘಾಂಗ್ರೆ, ಜ್ಞಾನೇಶ್ವರ ಭೋಸ್ಲೆ, ಬಾಬುರಾವ ಪರಮಶೆಟ್ಟಿ, ದಿಲೀಪಕುಮಾರ ಬಗ್ದಲ್ ಮತ್ತಿತರರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";