Friday, September 20, 2024

ಸುದ್ದಿ ಸದ್ದು ನ್ಯೂಸ್

ರಾಮನಗರ: ಈಗಲ್ಟನ್ ರೆಸಾರ್ಟ್‌‌ನ ಜೋಡಿ ವೃದ್ಧ ದಂಪತಿಗಳ ಕೊಲೆ ಮಾಡಿದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ರಾಮನಗರ ಪೊಲೀಸರು.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆನ್ನಟ್ಟಿದ್ದ ಪೊಲೀಸ್ರು ಕೊನೆಗೂ ಕಿಲ್ಲರ್ ನನ್ನ ಟ್ರೇಸ್ಮಾಡಿ ಹಿಡಿದು ಹಾಕಿದ್ದಾರೆ. ಈಗಲ್ಟನ್ ರೆಸಾರ್ಟ್‌‌ನ C ಬ್ಲಾಕ್ ನಲ್ಲಿ ರಘುರಾಜನ್(70) ಪತ್ನಿ ಆಶಾ (63) ವೃದ್ಧ ದಂಪತಿಗಳ ಕೊಲೆ ಪ್ರಕರಣವನ್ನು ಬಿಡದಿ ಠಾಣೆಯ ಇಸ್ಪೆಕ್ಟರ್ ಪ್ರಕಾಶ್ ಮತ್ತು ಅವರ ಗುಂಪು ಕೊನೆಗೂ ಪತ್ತೆ ಹಚ್ಚಿದೆ. 

ಮನೆಯ ಕೆಲಸಗಾರನೆ ವೃದ್ಧ ದಂಪತಿಗಳ ಬಳಿ ಇದ್ದ ಹಣ ಮತ್ತು ಬಂಗಾರ ದೋಚಲು ಪ್ಲಾನ್ ಮಾಡಿದ್ದ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಜೋಗಿಂದರ್ ಕುಮಾರ್ ಯಾದವ್ ಕೊಲೆ ಮಾಡಿರುವ ಆರೋಪಿಯಾಗಿದ್ದು, ಮತ್ತೊಬ್ಬ ಅವನ ಸಂಬಂಧಿಕ ರವೀಂದ್ರ ಯಾದವ್ಎ ಎಸ್ಕೇಪ್ ಆಗಿದ್ದಾನೆ.

ಕೊಲೆ ಮಾಡಿದ ಆರೋಪಿ ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಬಿಡದಿಯ ಕೇತಗಾನಹಳ್ಳಿ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ ಆತನಿಂದ ರೂ 56 ಸಾವಿರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ವೃದ್ಧ ದಂಪತಿಗಳು

ಕೊಲೆ ಆಗಿದ್ದು ಹೇಗೆ: ಆರೋಪಿ ಹಣಕ್ಕಾಗಿ ಮೊದಲು ರಘುರಾಮ್‌‌ನನ್ನು ಸುತ್ತಿಗೆಯಿಂದ ಬಲವಾಗಿ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಂಡ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ತಲೆಯಿಂದ ನೆತ್ತರು ಹರಿದು ಮಡಗಟ್ಟಿದ್ದನ್ನು ನೋಡಿ ಆರೋಪಿಗಳು ವಾಂತಿ ಮಾಡಿಕೊಂಡು ಸ್ಥಳದಲ್ಲೇ ತಲೆ ಸುತ್ತಿ ಬೀಳ್ತಾರೆ. ಸುಧಾರಿಸಿಕೊಳ್ಳಲು ಅಲ್ಲೆ ಇದ್ದ ಮದ್ಯದ ಬಾಟಲ್ ತೆಗೆದುಕೊಂಡು ರಾತ್ರಿಯಿಡಿ ಕುಡಿದು ಮುಂಜಾನೆ ಆತನ ಪತ್ನಿ ಆಶಾಳನ್ನು ಕೊಲೆ ಮಾಡಿ ಎಸ್ಕೇಪ್ ಆಗ್ತಾರೆ. ಚಿನ್ನಾಭರಣ ಇಟ್ಟಿರುವ ಕಪಾಟು ಲಾಕ್ ಆಗಿದ್ದರಿಂದ ಚಿನ್ನಾಭರಣ ದೋಚಲು ಆಗಿದೆ ಅವರ ಬಳಿ ಇದ್ದ ಹಣ ಮಾತ್ರ ಕದ್ದು ಅಲ್ಲಿಂದ ಎಸ್ಕೇಪ್ ಆಗಿದ್ದರು.

ಒಟ್ಟಿನಲ್ಲಿ ಕಷ್ಟ ಅಂತ ಕೆಲಸಕ್ಕೆ ಬಂದು ನಗನಾಣ್ಯಕ್ಕೆ ಆಸೆ ಬಿದ್ದು ವೃದ್ಧ ದಂಪತಿಗಳನ್ನು ಮಸಣಕ್ಕೆ ಸೇರಿಸಿದ್ದು ದುರಂತವೇ ಸರಿ. ಕೊಲೆಯ ಮತ್ತೊಬ್ಬ ಆರೋಪಿಯನ್ನು ಹಿಡಿಯಲು ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.

 

 

ಜಿಲ್ಲೆ

ರಾಜ್ಯ

error: Content is protected !!