Saturday, September 21, 2024

ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ: ಬಸವರಾಜ್ ಹೊರಟ್ಟಿ..

ಹುಬ್ಬಳ್ಳಿ (ಡಿ.10): ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ.ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು. ನಾನು ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾತನಾಡಿದ ಅವರು,ಇದೇ 13 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಶ್ನೋತ್ತರಗಳಿಗೆ ನಮ್ಮ ಹಕ್ಕಿದೆ ಸದನವನ್ನ ಸಂಪೂರ್ಣಗೊಳಿಸಬೇಕು.ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವ ಗುರಿ ಇದೆ.ಸದಸ್ಯರ ಚರ್ಚೆಗೆ ಹೆಚ್ಚಿನ ಸಮಯ ವ್ಯಯ ಮಾಡುವ ಉದ್ದೇಶ ಇದೆ‌. ಸಹಕಾರ ನೀಡುವಂತೆ ಎಲ್ಲರನ್ನೂ ಕೇಳಿಕೊಂಡಿದ್ದೇನೆ ಎಂದರು.

ವಿಷಯಾಧಾರಿಯ ಚರ್ಚೆ ಮಾಡಬೇಕು ಅಂತ ಮನವಿ ಮಾಡಿದ್ದೇನೆ. ನಿನ್ನೆಯವರೆಗೂ ಒಂದೇ ವಿಧೇಯಕ ಬಂದಿಲ್ಲ.ಅಧಿವೇಶನಕ್ಕೆ 5 ದಿನ ಮುಂಚಿತವಾಗಿಯೇ ವಿಧೇಯಕಗಳ ಮಾಹಿತಿ ಅಧಿಕೃತವಾಗಿ ಬರಬೇಕು.ದುರಾದೃಷ್ಟಕ ಇನ್ನೂ ವಿಧೇಯಕಗಳ ಬಗ್ಗೆ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗೆ, ವಿಪಕ್ಷ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು.

 

ಜಿಲ್ಲೆ

ರಾಜ್ಯ

error: Content is protected !!