Sunday, September 8, 2024

ಭಿಕ್ಷುಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿ ಅಬ್ದುಲ್ ಅರೆಸ್ಟ್

ಸುದ್ದಿ ಸದ್ದು ನ್ಯೂಸ್

ಚಿಕ್ಕಬಳ್ಳಾಪುರ: ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳು ಬಂದರು ಸಹ ಈ ಅತ್ಯಾಚಾರಗಳು ಮಾತ್ರ ಕಡಿಮೆಯಾಗುತ್ತಿಲ್ಲ ಅಪರಿಚಿತ ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.

ನಗರಸಭೆಯ ಮಾಂಸ ಮಾರಾಟ ಮಳಿಗೆಯ ಬಳಿ ಈ ಘಟನೆ ನಡೆದಿದ್ದು ಅತ್ಯಾಚಾರವೆಸಗಿದ ಆರೋಪಿ ಅಬ್ದುಲ್ಲಾ ಎಂದು ತಿಳಿದುಬಂದಿದೆ. ಆರೋಪಿ ಅಬ್ದುಲ್ಲಾ ತಳ್ಳುಗಾಡಿಯಲ್ಲಿ ದಿನಸಿ ಮತ್ತು ಮಸಾಲೆ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಿದ್ದ.

ಭಿಕ್ಷುಕಿಯ ದಿನಾಲೂ ಮಾಂಸ ಮಾರುವ ಮಳಿಗೆಯ ಬಳಿ ಮಲಗಿರುತ್ತಿದ್ದಳು, ಎಂದಿನಂತೆ ಗುರುವಾರ ರಾತ್ರಿ ಆ ಸ್ಥಳದಲ್ಲಿಯೇ ಮಲಗಿದ್ದ 40 ವರ್ಷದ ಅಮಾಯಕಿ ಭಿಕ್ಷುಕಿಯ ಮೇಲೆ ಅಬ್ದುಲ್ಲಾ ಅತ್ಯಚಾರ ನಡೆಸಲು ಮುಂದಾದ ಸಮಯದಲ್ಲಿ ಭಿಕ್ಷುಕಿ ತಕ್ಷಣ ಎಚ್ಚರಗೊಂಡಿದ್ದಾಳೆ ಭಿಕ್ಷುಕಿ ಕಿರುಚಾಡಿ ವಿರೋಧ ವ್ಯಕ್ತ ಪಡಿಸಿದಾಗ ಆಕೆಯ ತಲೆ ಮತ್ತು ಮುಖಕ್ಕೆ ಜೋರಾಗಿ ಹೊಡೆದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿದೆ ನಂತರ ಆರೋಪಿ ಅಬ್ದುಲ್ಲಾ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಘಟನೆಯ ನಂತರ ಭಿಕ್ಷುಕಿ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಮಾರನೇ ದಿನ ಅಲ್ಲಿದ್ದ ಅಂಗಡಿಯವರು ಬಾಗಿಲು ತೆರೆಯಲು ಬಂದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ ಕೂಡಲೇ ನಗರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಜಾಗದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆ ಕೃತ್ಯವನ್ನು ನಡೆಸಿದ ಆರೋಪಿ ತಳ್ಳುಗಾಡಿ ವ್ಯಾಪಾರಿ ಅಬ್ದುಲ್ಲಾ ಎಂದು ತಿಳಿದು ಬಂದಿದೆ ತಕ್ಷಣ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!